<p><strong>ಚನ್ನರಾಯಪಟ್ಟಣ:</strong> ‘ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.</p>.<p>ಪಟ್ಟಣದಲ್ಲಿ ಕರುನಾಡ ಸರ್ವಜನ ವೇದಿಕೆಯ ಸ್ವಾಭಿಮಾನಿ ಸಮಾವೇಶ ಹಾಗೂ ರಾಷ್ಟ್ರಕವಿ ಕುವೆಂಪು ಜಯಂತ್ಯುತ್ಸವದಲ್ಲಿ ಮಾತನಾಡಿದರು.</p>.<p>‘ಕುವೆಂಪು ರಚಿಸಿದ ಸಾಹಿತ್ಯದಲ್ಲಿ ಸಮಾಜಮುಖಿ ಚಿಂತನೆ ಇದೆ. ಸಮಾಜಕ್ಕೆ ದಾರಿ ದೀಪವಾಗಿದೆ. ನಾಡಿನ ಗೌರವವನ್ನು ಎತ್ತಿಹಿಡಿದಿದ್ದಾರೆ. ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಮೇರು ಸಾಹಿತಿ’ ಎಂದು ಬಣ್ಣಿಸಿದರು.</p>.<p> ಬೆಂಗಳೂರು ಅಂಬೇಡ್ಕರ್ ಸಂಘಟನೆಯ ಮುಖ್ಯಸ್ಥ ಟಿ.ಮೂರ್ತಿ ಮಾತನಾಡಿ, ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.</p>.<p>ಕಿರುತೆರೆ ಕಲಾವಿದ ವರ್ತೂರು ಸಂತೋಷ್, ಕರುನಾಡ ಸರ್ವಜನ ವೇದಿಕೆಯ ಗೌರವಾಧ್ಯಕ್ಷ ಕೆ.ಎಂ. ನಾಗೇಂದ್ರಬಾಬು, ಚಿತ್ರನಟ ಪ್ರಥಮ್ ಮಾತನಾಡಿದರು.</p>.<p>ಶಾಸಕ ಬಾಲಕೃಷ್ಣ ಅವರಿಗೆ ಆಧುನೀಕ ಭಗೀರಥ ಬಿರುದು ನೀಡಿ ಗೌರವಿಸಲಾಯಿತು. ಕಲಾವಿದ ಪುನೀತ್ ಮೈಸೂರು, ಸ್ಥಳದಲ್ಲಿ ಶಾಸಕ ಬಾಲಕೃಷ್ಣ ಅವರ ಚಿತ್ರ ಬಿಡಿಸಿದರು.</p>.<p>ಎಸ್ಎಸ್ಎಲ್ಸಿಯಲ್ಲಿ ಕನ್ನಡದಲ್ಲಿ 125 ಅಂಕಗಳಿಸಿದ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ಬೆಂಗಳೂರಿನ ಕನ್ನಡ ಪರ ಹೋರಾಟಗಾರರಾದ ದಿವಂಗತ ಬಸವರಾಜ್ ಮತ್ತು ಜಯರಾಂ ಕುಟುಂಬ ವರ್ಗದವರನ್ನು ಸನ್ಮಾನಿಸಲಾಯಿತು ಚಲನಚಿತ್ರ ಕಲಾವಿದರಾದ ತನಿಷಾ ಕುಪ್ಪಂಡ, ಭಾವನಾ, ಸೂರಜ್, ತುಕಾಲಿ ಸಂತೋಷ್, ಮಾನಸಾ, ಮಹಾಲಕ್ಷ್ಮೀ, ಪುನೀತ್ ಮೈಸೂರು, ಮಿಮಿಕ್ರಿ ಶ್ಯಾಮ್, ಸುನಾಮಿಕಿಟ್ಟಿ ಸೇರಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಜನರನ್ನು ರಂಜಿಸಿದರು.</p>.<p>ಕರುನಾಡ ವೇದಿಕೆ ರಾಜ್ಯಾಧ್ಯಕ್ಷ ಜೆ.ಆರ್. ಶರತ್, ಪುರಸಭಾಧ್ಯಕ್ಷೆ ಕೆ.ಎನ್. ಬನಶಂಕರಿ, ಉಪಾಧ್ಯಕ್ಷೆ ರಾಣಿ ಭಾಗವಹಿಸಿದ್ದರು.</p>.<p>Highlights - ಮುಖ್ಯಾಂಶಗಳು: ಮನರಂಜಿಸಿದ ಚಲನಚಿತ್ರ ಕಲಾವಿದರು ಆಧುನಿಕ ಭಗೀರಥ ಪ್ರಶಸ್ತಿ ಪ್ರದಾನ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ:</strong> ‘ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.</p>.<p>ಪಟ್ಟಣದಲ್ಲಿ ಕರುನಾಡ ಸರ್ವಜನ ವೇದಿಕೆಯ ಸ್ವಾಭಿಮಾನಿ ಸಮಾವೇಶ ಹಾಗೂ ರಾಷ್ಟ್ರಕವಿ ಕುವೆಂಪು ಜಯಂತ್ಯುತ್ಸವದಲ್ಲಿ ಮಾತನಾಡಿದರು.</p>.<p>‘ಕುವೆಂಪು ರಚಿಸಿದ ಸಾಹಿತ್ಯದಲ್ಲಿ ಸಮಾಜಮುಖಿ ಚಿಂತನೆ ಇದೆ. ಸಮಾಜಕ್ಕೆ ದಾರಿ ದೀಪವಾಗಿದೆ. ನಾಡಿನ ಗೌರವವನ್ನು ಎತ್ತಿಹಿಡಿದಿದ್ದಾರೆ. ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಮೇರು ಸಾಹಿತಿ’ ಎಂದು ಬಣ್ಣಿಸಿದರು.</p>.<p> ಬೆಂಗಳೂರು ಅಂಬೇಡ್ಕರ್ ಸಂಘಟನೆಯ ಮುಖ್ಯಸ್ಥ ಟಿ.ಮೂರ್ತಿ ಮಾತನಾಡಿ, ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.</p>.<p>ಕಿರುತೆರೆ ಕಲಾವಿದ ವರ್ತೂರು ಸಂತೋಷ್, ಕರುನಾಡ ಸರ್ವಜನ ವೇದಿಕೆಯ ಗೌರವಾಧ್ಯಕ್ಷ ಕೆ.ಎಂ. ನಾಗೇಂದ್ರಬಾಬು, ಚಿತ್ರನಟ ಪ್ರಥಮ್ ಮಾತನಾಡಿದರು.</p>.<p>ಶಾಸಕ ಬಾಲಕೃಷ್ಣ ಅವರಿಗೆ ಆಧುನೀಕ ಭಗೀರಥ ಬಿರುದು ನೀಡಿ ಗೌರವಿಸಲಾಯಿತು. ಕಲಾವಿದ ಪುನೀತ್ ಮೈಸೂರು, ಸ್ಥಳದಲ್ಲಿ ಶಾಸಕ ಬಾಲಕೃಷ್ಣ ಅವರ ಚಿತ್ರ ಬಿಡಿಸಿದರು.</p>.<p>ಎಸ್ಎಸ್ಎಲ್ಸಿಯಲ್ಲಿ ಕನ್ನಡದಲ್ಲಿ 125 ಅಂಕಗಳಿಸಿದ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ಬೆಂಗಳೂರಿನ ಕನ್ನಡ ಪರ ಹೋರಾಟಗಾರರಾದ ದಿವಂಗತ ಬಸವರಾಜ್ ಮತ್ತು ಜಯರಾಂ ಕುಟುಂಬ ವರ್ಗದವರನ್ನು ಸನ್ಮಾನಿಸಲಾಯಿತು ಚಲನಚಿತ್ರ ಕಲಾವಿದರಾದ ತನಿಷಾ ಕುಪ್ಪಂಡ, ಭಾವನಾ, ಸೂರಜ್, ತುಕಾಲಿ ಸಂತೋಷ್, ಮಾನಸಾ, ಮಹಾಲಕ್ಷ್ಮೀ, ಪುನೀತ್ ಮೈಸೂರು, ಮಿಮಿಕ್ರಿ ಶ್ಯಾಮ್, ಸುನಾಮಿಕಿಟ್ಟಿ ಸೇರಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಜನರನ್ನು ರಂಜಿಸಿದರು.</p>.<p>ಕರುನಾಡ ವೇದಿಕೆ ರಾಜ್ಯಾಧ್ಯಕ್ಷ ಜೆ.ಆರ್. ಶರತ್, ಪುರಸಭಾಧ್ಯಕ್ಷೆ ಕೆ.ಎನ್. ಬನಶಂಕರಿ, ಉಪಾಧ್ಯಕ್ಷೆ ರಾಣಿ ಭಾಗವಹಿಸಿದ್ದರು.</p>.<p>Highlights - ಮುಖ್ಯಾಂಶಗಳು: ಮನರಂಜಿಸಿದ ಚಲನಚಿತ್ರ ಕಲಾವಿದರು ಆಧುನಿಕ ಭಗೀರಥ ಪ್ರಶಸ್ತಿ ಪ್ರದಾನ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>