‘ಪರಿಷತ್ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಬಂದು ಹೇಳಿದಾಕ್ಷಣ ಯಾರೂ ಮತ ಹಾಕುವುದಿಲ್ಲ ಎಂದು ಶಿವಲಿಂಗೇಗೌಡ ಹೇಳಿರುವುದು ಖಂಡನಾರ್ಹ. ಅರಸೀಕೆರೆಯಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಮೂರು ಬಾರಿ ಅವರನ್ನು ಶಾಸಕರನ್ನಾಗಿ ಮಾಡಿದ್ದೇವೆ. ಪ್ರತಿ ಚುನಾವಣೆಯಲ್ಲೂ ದೇವೇಗೌಡರ ಮುಖ ನೋಡಿಕೊಂಡು ಜೆಡಿಎಸ್ಗೆ ಮತ ನೀಡಿದ್ದೇವೆಯೇ ಹೊರತು ಶಿವಲಿಂಗೇಗೌಡರ ಮುಖ ನೋಡಿ ಮತ ಹಾಕಿಲ್ಲ. ಕೂಡಲೇ ಶಾಸಕರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು’ ಎಂದು ಸದಸ್ಯರಾದ ಸಿಕಂದರ್, ಹರ್ಷವರ್ಧನ್, ನೀಲಗಿರಿ ಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.