ತಾಲ್ಲೂಕಿನ ಹುಲ್ಲೇನಹಳ್ಳಿ ಗ್ರಾಮದ ಸುಮಾ ತನ್ನ ಎರಡು ವರ್ಷದ ಪುತ್ರ ತನ್ಮಯ್ನನ್ನು ಕೊಲೆಮಾಡಿದ್ದಾಳೆ. ಜ.19 ರಂದು ಘಟನೆ ನಡೆದಿದ್ದು, ಮಗು ಸಾವಿರ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಪತಿನಂಜಪ್ಪ ಮರಣೋತ್ತರ ಪರೀಕ್ಷೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಹೂತಿದ್ದ ಶವ ಹೊರ ತೆಗೆದು ಪರೀಕ್ಷೆ ಮಾಡಲಾಗಿತ್ತು.