<p><strong>ಹಾಸನ: </strong>‘ಗಾಂಧಿಯ ಅಹಿಂಸಾ ತತ್ವ ಒಪ್ಪಿಕೊಂಡಿರುವ ವಿಶ್ವದ ಶೇ 90ಕ್ಕೂ ಹೆಚ್ಚು ರಾಷ್ಟ್ರಗಳು ಅವರನ್ನು ಗೌರವಿಸುತ್ತಿವೆ. ಆದರೆ, ನಮ್ಮ ದೇಶದಲ್ಲಿ ಅವರ ತತ್ವಾದರ್ಶಗಳ ವಿರುದ್ಧ ನಡೆಯುವವರೇ ಹೆಚ್ಚಿರುವುದು ವಿಪರ್ಯಾಸ’ ಎಂದು ಸಾಹಿತಿ ಮೇಟಿಕೆರೆ ಹಿರಿಯಣ್ಣ ಹೇಳಿದರು.</p>.<p>ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಟಿ.ಎಚ್. ಅಪ್ಪಾಜಿಗೌಡ ಅವರ ‘ಬೆಳಕಿನಂಬಲಿ’ ಕೃತಿ ಮತ್ತು ‘ಹೊಂದೇರು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಕನ್ನಡಿ ಎಂದಿಗೂ ಸುಳ್ಳು ಹೇಳುವುದಿಲ್ಲ. ಅದನ್ನು ಸುಳ್ಳು ಎಂದು ಯಾರಿಂದಲೂ ವಾದಿಸಲಾಗದು. ಅಂತೆಯೇ ಸತ್ಯವಾದ ಗಾಂಧಿ ತತ್ವ ಮತ್ತು ಅವರು ತೋರಿಸಿಕೊಟ್ಟ ಆದರ್ಶ ಮಾರ್ಗಗಳನ್ನು ಇಲ್ಲವಾಗಿಸಲು ಅಸಾಧ್ಯ ಎಂಬುದು ‘ಹೊಂದೇರು’ ಕೃತಿಯಲ್ಲಿನ ಕವನಗಳು ಸಾಕ್ಷೀಕರಿಸಿವೆ’ ಎಂದು ವಿವರಿಸಿದರು.</p>.<p>‘ಪರಿಸರ ಸಂರಕ್ಷಣೆ, ಹೆಣ್ಣು ಭ್ರೂಣಹತ್ಯೆ, ಸ್ತ್ರೀ ಶೋಷಣೆ, ಕಾರ್ಮಿಕರ ಬವಣೆ, ದುಡಿಯುವವರು ಹಾಗೂ ಆಳುವ ವರ್ಗದ ನಡುವಿನ ನೈಜ ಸ್ಥಿತಿ, ದೇವರ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಹಾಗೂ ನವಿರು ಪ್ರೀತಿ, ಪ್ರಣಯದ ಲೇಪನವೂ ಕೃತಿಯಲ್ಲಿ ಅಡಕವಾಗಿದೆ’ ಎಂದು ಹೇಳಿದರು.</p>.<p>‘ಪರಿವೀಕ್ಷಣೆ ಜ್ಞಾನ, ಸೂಕ್ಷ್ಮ ಅವಲೋಕನದ ಛಾಪು ಮೂಡಿಸದವರು ಕವಿಯಾಗಲು ಸಾಧ್ಯವಿಲ್ಲ. ಪುಸ್ತಕಗಳನ್ನು ರಚಿಸುವವರು ಬೋಧಕ, ವಿಮರ್ಶಕ, ಮಾರ್ಗದರ್ಶಕ ಆಗಿರಬೇಕು ಜತೆಗೆ ಸಾಮಾಜಿಕ ಕಳಕಳಿ ಇರುವುದು ಮುಖ್ಯ. ಅಂತೆಯೇ ಓದುಗರಿಗೆ ಅವಲೋಕಿಸುವ ಆಸಕ್ತಿ ಇರಬೇಕು’ ಎಂದರು.</p>.<p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ‘ಅನೇಕ ಭಾಷೆಗಳ ತಾಯಿ ಎನಿಸಿರುವ ಕನ್ನಡ ಸಂಸ್ಕೃತಿಯನ್ನು ಬಹುತೇಕರು ದೂರ ತಳ್ಳಿ ಪಾಶ್ಚಾತ್ಯದ ಗುಂಗಿನಲ್ಲಿ ತೇಲುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಾತೃ ಭಾಷೆ, ಹುಟ್ಟಿದ ನೆಲದ ಸಂಸ್ಕೃತಿ ಕಡೆಗಣಿಸಿದರೆ ತನ್ನ ತಳಹದಿಯನ್ನೇ ಕಳೆದುಕೊಂಡಂತೆ ಎಂಬ ಸತ್ಯ ಎಲ್ಲರೂ ಅರಿಯಬೇಕು’ ಎಂದರು.</p>.<p>‘ಬೆಳಕಿನಂಬಲಿ’ ಕೃತಿ ಕುರಿತು ಸಾಹಿತಿ ಹಾಗೂ ಚಿಂತಕ ಧನಂಜಯಜೀವಾಳ ಮಾತನಾಡಿ, ‘ಅಪ್ಪಾಜಿಗೌಡ ಅವರ ಕೃತಿಯಲ್ಲಿ ಅವೈಜ್ಞಾನಿಕ ಕೃಷಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಜತೆಗೆ ಕಾಡುಗಳು ನಾಶವಾದರೆ ನಗರಗಳು ಹೇಗೆ ಅವನತಿಯತ್ತ ಸಾಗುತ್ತದೆ ಎಂಬ ಬಗ್ಗೆಯೂ ಚನ್ನಾಗಿ ತಿಳಿಸಿದ್ದಾರೆ’ ಎಂದರು.</p>.<p>‘ಯಾವುದೇ ಒಂದು ಪುಸ್ತಕ ನಾವು ಓದಿದ ಬಳಿಕ ಮತ್ತೆ ಅದು ಬಳಕೆಗೆ ಬರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಓದಿದ ಪುಸ್ತಕಗಳನ್ನು ಸಾಹಿತ್ಯ ಪರಿಷತ್ತಿಗೆ ನೀಡಿ ತಾವು ಓದದೇ ಇರುವ ಪುಸ್ತಕ ಪಡೆಯುವ ಪದ್ಧತಿಜಾರಿಯಾಗಲಿ. ಇದರಿಂದ ಬೇರೆ ಬೇರೆ ಪುಸ್ತಕಗಳನ್ನು ಓದುವ ಅವಕಾಶ ಎಲ್ಲರಿಗೂ ಸಿಗಲಿದೆ’ ಎಂದು ಸಲಹೆ ನೀಡಿದರು.</p>.<p>ಸಾಹಿತಿ ಅಪ್ಪಾಜಿಗೌಡ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಎ.ಸಾವಿತ್ರಿ, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ ಇದ್ದರು.</p>.<p>ಗ್ಯಾರಂಟಿ ರಾಮಣ್ಣ ಪ್ರಕೃತಿ ಗೀತೆಗಳನ್ನು ಹಾಡಿದರು. ಮಮತಾ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>‘ಗಾಂಧಿಯ ಅಹಿಂಸಾ ತತ್ವ ಒಪ್ಪಿಕೊಂಡಿರುವ ವಿಶ್ವದ ಶೇ 90ಕ್ಕೂ ಹೆಚ್ಚು ರಾಷ್ಟ್ರಗಳು ಅವರನ್ನು ಗೌರವಿಸುತ್ತಿವೆ. ಆದರೆ, ನಮ್ಮ ದೇಶದಲ್ಲಿ ಅವರ ತತ್ವಾದರ್ಶಗಳ ವಿರುದ್ಧ ನಡೆಯುವವರೇ ಹೆಚ್ಚಿರುವುದು ವಿಪರ್ಯಾಸ’ ಎಂದು ಸಾಹಿತಿ ಮೇಟಿಕೆರೆ ಹಿರಿಯಣ್ಣ ಹೇಳಿದರು.</p>.<p>ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಟಿ.ಎಚ್. ಅಪ್ಪಾಜಿಗೌಡ ಅವರ ‘ಬೆಳಕಿನಂಬಲಿ’ ಕೃತಿ ಮತ್ತು ‘ಹೊಂದೇರು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಕನ್ನಡಿ ಎಂದಿಗೂ ಸುಳ್ಳು ಹೇಳುವುದಿಲ್ಲ. ಅದನ್ನು ಸುಳ್ಳು ಎಂದು ಯಾರಿಂದಲೂ ವಾದಿಸಲಾಗದು. ಅಂತೆಯೇ ಸತ್ಯವಾದ ಗಾಂಧಿ ತತ್ವ ಮತ್ತು ಅವರು ತೋರಿಸಿಕೊಟ್ಟ ಆದರ್ಶ ಮಾರ್ಗಗಳನ್ನು ಇಲ್ಲವಾಗಿಸಲು ಅಸಾಧ್ಯ ಎಂಬುದು ‘ಹೊಂದೇರು’ ಕೃತಿಯಲ್ಲಿನ ಕವನಗಳು ಸಾಕ್ಷೀಕರಿಸಿವೆ’ ಎಂದು ವಿವರಿಸಿದರು.</p>.<p>‘ಪರಿಸರ ಸಂರಕ್ಷಣೆ, ಹೆಣ್ಣು ಭ್ರೂಣಹತ್ಯೆ, ಸ್ತ್ರೀ ಶೋಷಣೆ, ಕಾರ್ಮಿಕರ ಬವಣೆ, ದುಡಿಯುವವರು ಹಾಗೂ ಆಳುವ ವರ್ಗದ ನಡುವಿನ ನೈಜ ಸ್ಥಿತಿ, ದೇವರ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಹಾಗೂ ನವಿರು ಪ್ರೀತಿ, ಪ್ರಣಯದ ಲೇಪನವೂ ಕೃತಿಯಲ್ಲಿ ಅಡಕವಾಗಿದೆ’ ಎಂದು ಹೇಳಿದರು.</p>.<p>‘ಪರಿವೀಕ್ಷಣೆ ಜ್ಞಾನ, ಸೂಕ್ಷ್ಮ ಅವಲೋಕನದ ಛಾಪು ಮೂಡಿಸದವರು ಕವಿಯಾಗಲು ಸಾಧ್ಯವಿಲ್ಲ. ಪುಸ್ತಕಗಳನ್ನು ರಚಿಸುವವರು ಬೋಧಕ, ವಿಮರ್ಶಕ, ಮಾರ್ಗದರ್ಶಕ ಆಗಿರಬೇಕು ಜತೆಗೆ ಸಾಮಾಜಿಕ ಕಳಕಳಿ ಇರುವುದು ಮುಖ್ಯ. ಅಂತೆಯೇ ಓದುಗರಿಗೆ ಅವಲೋಕಿಸುವ ಆಸಕ್ತಿ ಇರಬೇಕು’ ಎಂದರು.</p>.<p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ‘ಅನೇಕ ಭಾಷೆಗಳ ತಾಯಿ ಎನಿಸಿರುವ ಕನ್ನಡ ಸಂಸ್ಕೃತಿಯನ್ನು ಬಹುತೇಕರು ದೂರ ತಳ್ಳಿ ಪಾಶ್ಚಾತ್ಯದ ಗುಂಗಿನಲ್ಲಿ ತೇಲುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಾತೃ ಭಾಷೆ, ಹುಟ್ಟಿದ ನೆಲದ ಸಂಸ್ಕೃತಿ ಕಡೆಗಣಿಸಿದರೆ ತನ್ನ ತಳಹದಿಯನ್ನೇ ಕಳೆದುಕೊಂಡಂತೆ ಎಂಬ ಸತ್ಯ ಎಲ್ಲರೂ ಅರಿಯಬೇಕು’ ಎಂದರು.</p>.<p>‘ಬೆಳಕಿನಂಬಲಿ’ ಕೃತಿ ಕುರಿತು ಸಾಹಿತಿ ಹಾಗೂ ಚಿಂತಕ ಧನಂಜಯಜೀವಾಳ ಮಾತನಾಡಿ, ‘ಅಪ್ಪಾಜಿಗೌಡ ಅವರ ಕೃತಿಯಲ್ಲಿ ಅವೈಜ್ಞಾನಿಕ ಕೃಷಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಜತೆಗೆ ಕಾಡುಗಳು ನಾಶವಾದರೆ ನಗರಗಳು ಹೇಗೆ ಅವನತಿಯತ್ತ ಸಾಗುತ್ತದೆ ಎಂಬ ಬಗ್ಗೆಯೂ ಚನ್ನಾಗಿ ತಿಳಿಸಿದ್ದಾರೆ’ ಎಂದರು.</p>.<p>‘ಯಾವುದೇ ಒಂದು ಪುಸ್ತಕ ನಾವು ಓದಿದ ಬಳಿಕ ಮತ್ತೆ ಅದು ಬಳಕೆಗೆ ಬರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಓದಿದ ಪುಸ್ತಕಗಳನ್ನು ಸಾಹಿತ್ಯ ಪರಿಷತ್ತಿಗೆ ನೀಡಿ ತಾವು ಓದದೇ ಇರುವ ಪುಸ್ತಕ ಪಡೆಯುವ ಪದ್ಧತಿಜಾರಿಯಾಗಲಿ. ಇದರಿಂದ ಬೇರೆ ಬೇರೆ ಪುಸ್ತಕಗಳನ್ನು ಓದುವ ಅವಕಾಶ ಎಲ್ಲರಿಗೂ ಸಿಗಲಿದೆ’ ಎಂದು ಸಲಹೆ ನೀಡಿದರು.</p>.<p>ಸಾಹಿತಿ ಅಪ್ಪಾಜಿಗೌಡ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಎ.ಸಾವಿತ್ರಿ, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ ಇದ್ದರು.</p>.<p>ಗ್ಯಾರಂಟಿ ರಾಮಣ್ಣ ಪ್ರಕೃತಿ ಗೀತೆಗಳನ್ನು ಹಾಡಿದರು. ಮಮತಾ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>