<p><strong>ಕೊಣನೂರು (ಹಾಸನ ಜಿಲ್ಲೆ):</strong> ಸಮೀಪದ ಸಿದ್ಧಾಪುರ ಗೇಟ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಕೋಟೆಕಾರ್ (47) ಅವರ ಮೃತದೇಹವು ಅವರು ವಾಸವಿದ್ದ ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೊಠಡಿಯಲ್ಲಿ ಸೋಮವಾರ ಕಂಡು ಬಂದಿದೆ. ಆದರೆ ಮೃತಪಟ್ಟ ಸಮಯ, ದಿನ ಗೊತ್ತಾಗಿಲ್ಲ. ದೇಹದಿಂದ ರಕ್ತಸ್ರಾವವಾಗಿದೆ.</p>.<p>ಕುಂದಾಪುರ ಸಮೀಪದ ಬಸೂರು ಗ್ರಾಮದವರಾದ ಅವರಿಗೆ ತಾಯಿ, ಇಬ್ಬರು ಅಣ್ಣಂದಿರು ಮತ್ತು ಅಕ್ಕ ಇದ್ದಾರೆ.</p>.<p>ಶನಿವಾರ ಶಾಲೆಯ ಅವಧಿ ಮುಗಿದ ನಂತರ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸೋಮವಾರ ಬೆಳಿಗ್ಗೆ ಶಾಲೆಗೂ ಬಂದಿರಲಿಲ್ಲ. ಸಿಬ್ಬಂದಿ ಅವರ ಮೊಬೈಲ್ ಫೋನ್ಗೆ ಕರೆ ಮಾಡಿದಾಗ ಸ್ಪಂದನೆಯೂ ದೊರಕಿರಲಿಲ್ಲ. ನಂತರ ಅವರ ಕೊಠಡಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂತು.</p>.<p>ಈಶ್ವರೀಯ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದ ಅವರು ಸಮೀಪದ ಹಂಡ್ರಂಗಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಳಿಕ ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಣನೂರು (ಹಾಸನ ಜಿಲ್ಲೆ):</strong> ಸಮೀಪದ ಸಿದ್ಧಾಪುರ ಗೇಟ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಕೋಟೆಕಾರ್ (47) ಅವರ ಮೃತದೇಹವು ಅವರು ವಾಸವಿದ್ದ ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೊಠಡಿಯಲ್ಲಿ ಸೋಮವಾರ ಕಂಡು ಬಂದಿದೆ. ಆದರೆ ಮೃತಪಟ್ಟ ಸಮಯ, ದಿನ ಗೊತ್ತಾಗಿಲ್ಲ. ದೇಹದಿಂದ ರಕ್ತಸ್ರಾವವಾಗಿದೆ.</p>.<p>ಕುಂದಾಪುರ ಸಮೀಪದ ಬಸೂರು ಗ್ರಾಮದವರಾದ ಅವರಿಗೆ ತಾಯಿ, ಇಬ್ಬರು ಅಣ್ಣಂದಿರು ಮತ್ತು ಅಕ್ಕ ಇದ್ದಾರೆ.</p>.<p>ಶನಿವಾರ ಶಾಲೆಯ ಅವಧಿ ಮುಗಿದ ನಂತರ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸೋಮವಾರ ಬೆಳಿಗ್ಗೆ ಶಾಲೆಗೂ ಬಂದಿರಲಿಲ್ಲ. ಸಿಬ್ಬಂದಿ ಅವರ ಮೊಬೈಲ್ ಫೋನ್ಗೆ ಕರೆ ಮಾಡಿದಾಗ ಸ್ಪಂದನೆಯೂ ದೊರಕಿರಲಿಲ್ಲ. ನಂತರ ಅವರ ಕೊಠಡಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂತು.</p>.<p>ಈಶ್ವರೀಯ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದ ಅವರು ಸಮೀಪದ ಹಂಡ್ರಂಗಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಳಿಕ ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>