ಅಹಿಂಸಾ ಪರಮೋ ಧರ್ಮ ಮತ್ತು ಬಾಹುಬಲಿ ಸ್ವಾಮೀ ಕೀ ಎಂಬ ನಾಮಫಲಕದೊಂದಿಗೆ ಮಂಗಳವಾದ್ಯ, ಕಲಾ ತಂಡಗಳು ಸಾಗಿದವು. ಈ ರಥ ಯಾತ್ರೆಯಲ್ಲಿ ಗಣಿನಿ ಆರ್ಯಿಕಾ ವಿಶಾಶ್ರೀ ಮಾತಾಜಿ ಮತ್ತು ಸಂಘಸ್ಥ ತ್ಯಾಗಿಗಳು, ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ತಮಿಳುನಾಡಿನ ಅರಹಂತ ಗಿರಿಯ ಧವಲಕೀರ್ತಿ ಸ್ವಾಮೀಜಿ, ನರಸಿಂಹರಾಜ ಪುರದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಭಾನುಕೀರ್ತಿ ಸ್ವಾಮೀಜಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮಂಡ್ಯಾದ ಧರಣಪ್ಪ ಕುಟುಂಬ ವರ್ಗದವರು ಭೋಜನದ ಸೇವಾಕರ್ತರಾಗಿದ್ದರು.