ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಬೆಲೆ ಏರಿಕೆಗೆ ವಿರೋಧ

Last Updated 16 ಜೂನ್ 2021, 15:18 IST
ಅಕ್ಷರ ಗಾತ್ರ

ಹಾಸನ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದ ವಿವಿಧೆಡೆ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಡೈರಿ ವೃತ್ತ, ಕೆಂಚಾಂಬ ಪೆಟ್ರೋಲ್ ಬಂಕ್ ಮುಂಭಾಗ ನೂರಾರು ಕಾಂಗ್ರೆಸ್ಕಾರ್ಯಕರ್ತರ ಬೈಕ್‌ಗಳಿಗೆ ಪೆಟ್ರೋಲ್‌ ಹಾಕಿಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯ‌ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ತೈಲ ಬೆಲೆ‌ ಏರಿಕೆ‌ ಮಾಡಿ ಜನವಿರೋಧಿಯಾಗಿ‌‌ ನಡೆದುಕೊಳ್ಳುತ್ತಿದೆ. ಇದೊಂದು ಪಿಕ್ ಪಾಕೇಟ್‌ ಮಾಡುವ ಸರ್ಕಾರವಾಗಿದೆ‌ ಎಂದು ಆಕ್ರೋಶವ್ಯಕ್ತಪಡಿಸಿದರು.

ಹಿರಿಯ ಮುಖಂಡ ಬಾಗೂರು ಮಂಜೇಗೌಡ ಮಾತನಾಡಿ, ಇಂಧನ ಬೆಲೆ ಏರಿಕೆಯಿಂದಜನಸಾಮಾನ್ಯರಿಗೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ‌ ಕಲಿಸಲಿದ್ದಾರೆ ಎಂದುಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌, ವಿಧಾನ ಪರಿಷತ್ ಸದಸ್ಯಎಂ.ಎ.ಗೋಪಾಲಸ್ವಾಮಿ, ಮುಖಂಡರಾದ ಹೆರುಗು ವಾಸುದೇವ್, ಹೆರಗು ಗಣೇಶ್, ದುದ್ದ ಬ್ಲಾಕ್‌ಅಧ್ಯಕ್ಷ ವಿಶ್ವನಾಥ್ ಹೊಳೆನರಸೀಪುರ ಬ್ಲಾಕ್ ಅಧ್ಯಕ್ಷ ಹೊನ್ನಿಕೊಪ್ಪಲು ಮಂಜಣ್ಣ, ಚೇತನ್,ಮೆಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್, ‌ಮುಖಂಡರಾದ ವಕೀಲರಾದ ಹರೀಶ್,ಬಾಂಬೆ ಸುರೇಶ್, ಮಡೆನೂರು ರಮೇಶ್, ‌ದೊಡ್ಡಕರಡೆವು ಸೋನು, ಕಟ್ಟೇಪ್ರಕಾಶ್, ಕಬಳಿ
ರಾಮಚಂದ್ರ, ಗುರುಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT