ಗೆಳೆಯರ ಬಳಗದ ಸಂಚಾಲಕ ಧನಂಜಯ ಜೀವಾಳ ಮಾತನಾಡಿ, ಹಳೇ ನ್ಯಾಯಾಲಯದ ಕಟ್ಟಡವನ್ನು ನಗರದ ಸಾಂಸ್ಕೃತಿಕ ಚಟುವಟಿಕೆಗೆ ಹಾಗೂ ಕಲಾ ಗ್ಯಾಲರಿಯನ್ನಾಗಿಪರಿವರ್ತಿಸಬಹುದು. ಜಾನಪದ, ಪುರಾತತ್ವ, ಕೌತುಕ, ಶೈಕ್ಷಣಿಕ, ಕರಕುಶಲ, ಜೀವವೈವಿಧ್ಯ ಮ್ಯೂಸಿಯಂ,ಶಾಶ್ವತ ಪುಸ್ತಕ ಮೇಳ,ಕಲಾ ಪ್ರದರ್ಶನ, ಗ್ರಂಥಾಲಯ,ಸಾವಯವ ಕೃಷಿ, ರಂಗಚಟುವಟಿಕೆ, ಸಾಹಿತ್ಯ, ಲಲಿತಕಲೆ, ಯೋಗ, ಒಳಾಂಗಣ ಕ್ರೀಡೆ, ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಹೋಗುವಂತೆ ಬಳಸಿಕೊಳ್ಳಲು ಸಾಧ್ಯವಿದೆ ಎಂದರು.