ಹೊಳೆನರಸೀಪುರ ತಾಲ್ಲೂಕಿನ ಎಳ್ಳೇಶಪುರ ಗ್ರಾಮದ ವೈ.ಆರ್. ಶಿವಾನಂದ, ವೈ.ಎಸ್. ನಂದೀಶ್, ವೈ.ಬಿ. ಕುಮಾರಸ್ವಾಮಿ, ಮಹೇಶ್, ಪುಟ್ಟನಿಂಗೇಗೌಡ, ಸೋಮಶೇಖರ, ಕಳೇಗೌಡ, ಪುಟ್ಟಶೆಟ್ಟಿ, ನಂಜುಡಶೆಟ್ಟಿ, ಚಿಕ್ಕೇಗೌಡ ಹಾಗೂ ಇತರರು ರಸ್ತೆಗಾಗಿ ಜಮೀನು ಕಳೆದುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.