ಸದಸ್ಯ ಕ್ರಾಂತಿ ಮಾತನಾಡಿ, ‘ನಗರಸಭೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಆಡಳಿತ ನಡೆಸಲು ಅಧ್ಯಕ್ಷರು ವಿಫಲರಾಗಿದ್ದಾರೆ. ಸಾಲಗಾಮೆ ರಸ್ತೆಯಲ್ಲಿ ನೂರಾರು ವರ್ಷಗಳಿಂದ ಗಾಳಿ, ನೆರಳು ನೀಡುತ್ತಿದ್ದ ದೊಡ್ಡ ಮರಗಳನ್ನೇ ಬುಡಸಮೇತ ಕತ್ತರಿಸಲಾಗಿದೆ. ಬಡವ ಅಥವಾ ರೈತ ಈ ರೀತಿ ಮರ ಕಡಿದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದರು. ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಬೇಕು’ ಎಂದು ಆಗ್ರಹಿಸಿದರು.