ತಿಪಟೂರು ಕಡೆಯಿಂದ ಬರುತ್ತಿದ್ದ ಮಿನಿ ವ್ಯಾನ್ ಹಾಗೂ ಹಾಸನದಿಂದ ಬರುತ್ತಿದ್ದ ಟ್ಯಾಂಕರ್ ಮಧ್ಯೆ ಭಾನುವಾರ ಸಂಜೆ ಅಪಘಾತ ನಡೆದಿದ್ದು, ಉರುಳಿ ಬಿದ್ದ ಟ್ಯಾಂಕರ್ನಿಂದ 20 ಸಾವಿರ ಲೀಟರ್ ಪೆಟ್ರೋಲ್ ವ್ಯರ್ಥವಾಗಿ ಹರಿಯಿತು. ವಿಷಯ ತಿಳಿದ ಸುತ್ತಲಿನ ಗ್ರಾಮಗಳ ಜನರು, ಪಾತ್ರೆ, ಡಬ್ಬಗಳಲ್ಲಿ ಪೆಟ್ರೋಲ್ ತುಂಬಿಕೊಳ್ಳಲು ಮುಗಿ ಬಿದ್ದರು. ಕೆಲವು ಪೆಟ್ರೋಲ್ ತೆಗೆದುಕೊಂಡು ಹೋದರು.