ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ಶನಿವಾರ ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವುದರಿಂದ, ಭದ್ರತೆ ಸಲುವಾಗಿಕಾಲುವೆಯನ್ನೇ ಮುಚ್ಚಲಾಗಿದೆ.
ಸಮಾವೇಶ ನಡೆಯಲಿರುವ ಸ್ಥಳಕ್ಕೆ ಸಮೀಪದಲ್ಲಿರುವ ಕಾಲುವೆಯ ಹಲವೆಡೆ ಮಣ್ಣು ಸುರಿದು ಪೂರ್ತಿ ಮುಚ್ಚಲಾಗಿದೆ. ಅಲ್ಲಿಯೇ ಪೊಲೀಸರ ಭದ್ರತಾ ತಪಾಸಣೆ ಸಾಧನಗಳನ್ನು ಅಳವಡಿಸಲಾಗಿದೆ.