ಬೆಂಗಳೂರು– ಮಂಗಳೂರು ನಡುವಿನ ಸಂಪರ್ಕಕ್ಕೆ ಭಾರಿ ವಾಹನಗಳಿಗೆ ಶಿರಾಡಿ, ಚಾರ್ಮಾಡಿ, ಸಂಪಾಜೆ ಎಲ್ಲಾ ಮಾರ್ಗಗಳೂ ಸಹ ಬಂದ್ ಆಗಿ 20 ದಿನಗಳು ಕಳೆದಿವೆ. ಪ್ರಯಾಣಿಕರು, ಲಾರಿ ಮಾಲೀಕರು ದೋಣಿಗಾಲ್ ಭೂಕುಸಿತ ದುರಸ್ತಿ ಕಾಮಗಾರಿ ಮುಗಿಯುವುದನ್ನೇ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಪುನಃ ಭೂ–ಕುಸಿತವಾದರೆ ಸಮಸ್ಯೆ ಮತ್ತೆ ಉಲ್ಬಣಿಸಲಿದೆ.