‘ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುತ್ತಿರುವ ಕಡಲೆ ಕಾಳುಗಳು ಮೇಲ್ನೋಟಕ್ಕೆ ಕಾಳಿನಂತೆ ಕಾಣಿಸುತ್ತಿವೆ. ಆದರೆ ಇದರಲ್ಲಿ ಬರೀ ಸಿಪ್ಪೆಯೇ ಇವೆ. ಕಾಳಿನ ಅಂಶವೇ ಇಲ್ಲ. ಸರ್ಕಾರ ಕಳಪೆ ಕಡಲೆಕಾಳು ವಿತರಣೆಯನ್ನು ಕೂಡಲೇ ನಿಲ್ಲಿಸಿ, ಗುಣಮಟ್ಟದ ಕಾಳನ್ನು ವಿತರಿಸಬೇಕು. ಇಲ್ಲದಿದ್ದರೆ ತಾಲ್ಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿ ಹಾಗೂ ಸಂಬಂಧಿಸಿದ ಇಲಾಖೆಯ ಎದುರು ಈಗಾಗಲೇ ವಿತರಿಸಿದ ಕಳಪೆ ಕಡಲೇಕಾಳನ್ನು ಇಟ್ಟು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.