’ಜಗತ್ತು ಕೊರೊನಾ ವೈರಸ್ ನಿಂದ ತೊಂದರೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ್ದಾರೆ. ಕ್ವಾಲಿಟಿ ಬಾರ್ನ ಮುಂದಿನ ಬಾಗಿಲಿಗೆ ಮುದ್ರೆ ಒತ್ತಿದ್ದು, ಹಿಂದಿನ ಬಾಗಿಲ ಮೂಲಕ ನಿತ್ಯ 5 ರಿಂದ 10 ವಾಹನಗಳಲ್ಲಿ ಮದ್ಯ ಸರಬರಾಜು ಆಗುತ್ತಿತ್ತು. ಗ್ರಾಮೀಣ ಭಾಗದ ಪೆಟ್ಟಿಗೆ ಅಂಗಡಿಗಳಿಗೆ ಇಲ್ಲಿಂದಲೇ ಮದ್ಯ ಪೂರೈಕೆಯಾಗಿದೆ. ಕ್ವಾಲಿಟಿ ಬಾರ್ ನ ಸ್ಟಾಕ್ ಲೀಸ್ಟ್ ಮತ್ತು ದಾಳಿಯಾದ ಸಂದರ್ಭದಲ್ಲಿ ಸ್ಟಾಕ್ ಪರಿಶೀಲಿಸಿದಾಗ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಬಾರ್ ಮಾಲೀಕ ಯಾರೇ ಆಗಿದ್ದರೂ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.