ಸಭೆಯ ಬಳಿಕ ರೈತರ ಬಳಿ ಬಂದ ಸಚಿವರು, ‘ಬೆಳಿಗ್ಗೆ 9.30 ಕ್ಕೆ ರೈತ ಮುಖಂಡರ ಜತೆ ಮಾತುಕತೆಗೆ ಸಮಯ ನಿಗದಿಪಡಿಸಲಾಗಿತ್ತು. ನಾನು 9.40ಕ್ಕೆ ಬಂದಿದ್ದೆ. ಆದರೆ ರೈತರು ಯಾರೂ ಬಂದಿರಲಿಲ್ಲ. 10.20ರ ವರೆಗೆ ಕಾದು ಕುಳಿತ ಬಳಿಕ ಸಭೆ ಆರಂಭಿಸಿದೆ. ರೈತರನ್ನು ಕಾಯುವಂತೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದರು.