<p><strong>ಬೇಲೂರು</strong>: ಇಲ್ಲಿನ ಪುರಸಭೆ ಅಧ್ಯಕ್ಷರ ಚುನಾವಣೆ ಮೇ 11ರಂದು ನಡೆಯಲಿದ್ದು, ಎರಡನೇ ಅವಧಿಯ ಉಳಿದ 5 ತಿಂಗಳಿಗೆ ಕಾಂಗ್ರೆಸ್ ಪಕ್ಷದ ಅಕ್ರಂ ಷರೀಫ್ ಅವರಿಂದ ತುರುಸಿನ ಪೈಪೋಟಿ ಎದುರಾಗಿದೆ. ಅಕ್ರಂ ಷರೀಫ್, ಜೆಡಿಎಸ್ನ 5, ಕಾಂಗ್ರೆಸ್ನ 6 ಹಾಗೂ ಬಿಜೆಪಿಯ ಒಬ್ಬ ಸದಸ್ಯರ ಜೊತೆಗೆ 25 ದಿನಗಳಿಂದ ಅಜ್ಙಾತ ಸ್ಥಳ ಸೇರಿದ್ದಾರೆ.</p>.<p>ಇದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಪಕ್ಷದ ವರಿಷ್ಠರ ಸೂಚನೆಗೂ ಮುನ್ನವೇ ಅಕ್ರಂ ಷರೀಫ್, ಬಿಜೆಪಿ–ಜೆಡಿಎಸ್ ನಾಯಕರ ಜೊತೆಗೆ ಕೈಜೋಡಿಸಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಸ್ವಲ್ಪ ಆತಂಕ ಮೂಡಿಸಿದೆ.</p>.<p>ಪುರಸಭೆಯಲ್ಲಿ 17 ಕಾಂಗ್ರೆಸ್, 5 ಜೆಡಿಎಸ್, 1 ಬಿಜೆಪಿ ಸೇರಿ 23 ಸದಸ್ಯ ಬಲವಿದ್ದು, ಕಾಂಗ್ರೆಸ್ ಸುಮಾರು 20 ವರ್ಷಗಳ ನಂತರ ಅಧಿಕಾರ ಹಿಡಿದಿದೆ. ಆದರೆ ಕಾಂಗ್ರೆಸ್ ಸದಸ್ಯರ ಅಧಿಕಾರದ ಲಾಲಸೆ, ನಾಯಕರ ಗುಂಪುಗಾರಿಕೆ, ಕಚ್ಚಾಟಗಳನ್ನು ನಿಭಾಯಿಸಿ, ಹೊಂದಾಣಿಕೆಗೆ ತರುವಲ್ಲಿ ಪ್ರಮುಖ ನಾಯಕರ ವಿಫಲತೆಯಿಂದ ಪುರಸಭೆ ವ್ಯಾಪ್ತಿಯ ಜನರು ಪರಿತಪಿಸುತ್ತಿದ್ದಾರೆ.</p>.<p>2021 ರಲ್ಲಿ ಪುರಸಭೆಗೆ ಚುನಾವಣೆ ನಡೆದ ನಂತರ ಮೊದಲ ಅವಧಿಯಲ್ಲಿ ಎಸ್.ಸಿ. ಮೀಸಲಾತಿಯಲ್ಲಿ ಸಿ.ಎನ್.ದಾನಿ, ತೀರ್ಥಕುಮಾರಿ ವೆಂಕಟೇಶ್ ಹಾಗೂ ಕೆಲ ದಿನ ಮೀನಾಕ್ಷಿ ಅಧ್ಯಕ್ಷರಾಗಿ ಕೆಲಸ ಮಾಡಿದರು. ಎರಡನೇ ಅವಧಿಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಎ.ಆರ್. ಅಶೋಕ್ ಅಧ್ಯಕ್ಷರಾದರು, ನಂತರ ಒಪ್ಪಂದದಂತೆ ಅವಧಿಗೆ ಸರಿಯಾಗಿ ರಾಜೀನಾಮೆ ಕೊಡಲಿಲ್ಲ ಎಂದು ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.</p>.<p>ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಹೊಸ ಅಧ್ಯಕ್ಷರು ಯಾರೂ ಅಗಲು ಸಾಧ್ಯವಾಗದೇ, ಒಂದು ವರ್ಷದಿಂದ ಉಪಾಧ್ಯಕ್ಷೆಯಾಗಿದ್ದ ಉಷಾ ಅವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವರು.</p>.<p>ಈಗ ಎ.ಆರ್.ಅಶೋಕ್, ನ್ಯಾಯಾಲಯದಿಂದ ಪ್ರಕರಣವನ್ನು ವಾಪಸ್ ಪಡೆದಿರುವುದರಿಂದ ಸೋಮವಾರ ಚುನಾವಣೆ ನಿಗದಿಯಾಗಿದ್ದು, ಅಕ್ರಂ ಅಧ್ಯಕ್ಷರಾಗಲಿ ಎಂಬ ಉದ್ದೇಶದಿಂದ ಪ್ರಕರಣ ವಾಪಸ್ ಪಡೆದಿದ್ದೇನೆ ಎಂದು ಎ.ಆರ್.ಅಶೋಕ್ ಹೇಳುತ್ತಿದ್ದಾರೆ.</p>.<p>ಪಕ್ಷದಲ್ಲಿ ಗುಂಪುಗಾರಿಕೆ, ನಾಯಕರ ಭಿನ್ನಾಭಿಪ್ರಾಯದಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಶಿವರಾಂ ಸೋಲಲು ಕಾರಣ ಎಂಬುದು ಸಾರ್ವಜನಿಕವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ ಬೇಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಕುಗ್ಗುತ್ತಿದೆ. ಸಾಕಷ್ಟು ಅನುಭವವಿರುವ ಬಿ.ಶಿವರಾಂ ನಾಯಕರನ್ನು ಒಗ್ಗೂಡಿಸಿ, ಹೊಂದಾಣಿಕೆಯಿಂದ ಕರೆದುಕೊಂಡು ಹೋಗುವಲ್ಲಿ ಎಡವುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದೆ.</p>.<p> <strong>ನಾನು ಪ್ರಬಲ ಆಕಾಂಕ್ಷಿ</strong></p><p> ಎ.ಆರ್. ಅಶೋಕ್ ವಿರುದ್ಧ ನ್ಯಾಯಾಲಯದ ಪ್ರಕರಣವನ್ನು ನಿಭಾಯಿಸು ನಿನ್ನನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಬಿ.ಶಿವರಾಂ ಸೈಯದ್ ತೌಫಿಕ್ ಹಾಗೂ ಎಂ.ಆರ್. ವೆಂಕಟೇಶ್ ಹೇಳಿದ್ದರು. ಆರೋಗ್ಯ ಸರಿ ಇಲ್ಲದಿದ್ದರೂ ಹೈಕೋರ್ಟ್ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿರುವೆ.</p><p> ಲಕ್ಷಾಂತರ ರೂಪಾಯಿ ವ್ಯಯವಾಗಿದೆ ಎಂದು ಕಾಂಗ್ರೆಸ್ ಸದಸ್ಯ ಬಿ.ಗಿರೀಶ್ ಹೇಳುತ್ತಿದ್ದಾರೆ. ನಾವು ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ವಿರುದ್ದ ಹೋರಾಡಿ ಈಗ ಅವರ ಜೊತೆ ಮೃತ್ರಿಯಿಂದ ಅಧಿಕಾರ ಹಿಡಿಯುವುದು ಪಕ್ಷದ ಬದ್ಧತೆ ತೋರಿಸುವುದಿಲ್ಲ. ಎರಡನೇ ಅವಧಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ನಾನು ಸಾಮಾನ್ಯ ವರ್ಗದವನಾಗಿದ್ದೇನೆ. ನನ್ನನ್ನೇ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಬೇಕು ನಾನು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಲೂರು</strong>: ಇಲ್ಲಿನ ಪುರಸಭೆ ಅಧ್ಯಕ್ಷರ ಚುನಾವಣೆ ಮೇ 11ರಂದು ನಡೆಯಲಿದ್ದು, ಎರಡನೇ ಅವಧಿಯ ಉಳಿದ 5 ತಿಂಗಳಿಗೆ ಕಾಂಗ್ರೆಸ್ ಪಕ್ಷದ ಅಕ್ರಂ ಷರೀಫ್ ಅವರಿಂದ ತುರುಸಿನ ಪೈಪೋಟಿ ಎದುರಾಗಿದೆ. ಅಕ್ರಂ ಷರೀಫ್, ಜೆಡಿಎಸ್ನ 5, ಕಾಂಗ್ರೆಸ್ನ 6 ಹಾಗೂ ಬಿಜೆಪಿಯ ಒಬ್ಬ ಸದಸ್ಯರ ಜೊತೆಗೆ 25 ದಿನಗಳಿಂದ ಅಜ್ಙಾತ ಸ್ಥಳ ಸೇರಿದ್ದಾರೆ.</p>.<p>ಇದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಪಕ್ಷದ ವರಿಷ್ಠರ ಸೂಚನೆಗೂ ಮುನ್ನವೇ ಅಕ್ರಂ ಷರೀಫ್, ಬಿಜೆಪಿ–ಜೆಡಿಎಸ್ ನಾಯಕರ ಜೊತೆಗೆ ಕೈಜೋಡಿಸಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಸ್ವಲ್ಪ ಆತಂಕ ಮೂಡಿಸಿದೆ.</p>.<p>ಪುರಸಭೆಯಲ್ಲಿ 17 ಕಾಂಗ್ರೆಸ್, 5 ಜೆಡಿಎಸ್, 1 ಬಿಜೆಪಿ ಸೇರಿ 23 ಸದಸ್ಯ ಬಲವಿದ್ದು, ಕಾಂಗ್ರೆಸ್ ಸುಮಾರು 20 ವರ್ಷಗಳ ನಂತರ ಅಧಿಕಾರ ಹಿಡಿದಿದೆ. ಆದರೆ ಕಾಂಗ್ರೆಸ್ ಸದಸ್ಯರ ಅಧಿಕಾರದ ಲಾಲಸೆ, ನಾಯಕರ ಗುಂಪುಗಾರಿಕೆ, ಕಚ್ಚಾಟಗಳನ್ನು ನಿಭಾಯಿಸಿ, ಹೊಂದಾಣಿಕೆಗೆ ತರುವಲ್ಲಿ ಪ್ರಮುಖ ನಾಯಕರ ವಿಫಲತೆಯಿಂದ ಪುರಸಭೆ ವ್ಯಾಪ್ತಿಯ ಜನರು ಪರಿತಪಿಸುತ್ತಿದ್ದಾರೆ.</p>.<p>2021 ರಲ್ಲಿ ಪುರಸಭೆಗೆ ಚುನಾವಣೆ ನಡೆದ ನಂತರ ಮೊದಲ ಅವಧಿಯಲ್ಲಿ ಎಸ್.ಸಿ. ಮೀಸಲಾತಿಯಲ್ಲಿ ಸಿ.ಎನ್.ದಾನಿ, ತೀರ್ಥಕುಮಾರಿ ವೆಂಕಟೇಶ್ ಹಾಗೂ ಕೆಲ ದಿನ ಮೀನಾಕ್ಷಿ ಅಧ್ಯಕ್ಷರಾಗಿ ಕೆಲಸ ಮಾಡಿದರು. ಎರಡನೇ ಅವಧಿಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಎ.ಆರ್. ಅಶೋಕ್ ಅಧ್ಯಕ್ಷರಾದರು, ನಂತರ ಒಪ್ಪಂದದಂತೆ ಅವಧಿಗೆ ಸರಿಯಾಗಿ ರಾಜೀನಾಮೆ ಕೊಡಲಿಲ್ಲ ಎಂದು ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.</p>.<p>ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಹೊಸ ಅಧ್ಯಕ್ಷರು ಯಾರೂ ಅಗಲು ಸಾಧ್ಯವಾಗದೇ, ಒಂದು ವರ್ಷದಿಂದ ಉಪಾಧ್ಯಕ್ಷೆಯಾಗಿದ್ದ ಉಷಾ ಅವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವರು.</p>.<p>ಈಗ ಎ.ಆರ್.ಅಶೋಕ್, ನ್ಯಾಯಾಲಯದಿಂದ ಪ್ರಕರಣವನ್ನು ವಾಪಸ್ ಪಡೆದಿರುವುದರಿಂದ ಸೋಮವಾರ ಚುನಾವಣೆ ನಿಗದಿಯಾಗಿದ್ದು, ಅಕ್ರಂ ಅಧ್ಯಕ್ಷರಾಗಲಿ ಎಂಬ ಉದ್ದೇಶದಿಂದ ಪ್ರಕರಣ ವಾಪಸ್ ಪಡೆದಿದ್ದೇನೆ ಎಂದು ಎ.ಆರ್.ಅಶೋಕ್ ಹೇಳುತ್ತಿದ್ದಾರೆ.</p>.<p>ಪಕ್ಷದಲ್ಲಿ ಗುಂಪುಗಾರಿಕೆ, ನಾಯಕರ ಭಿನ್ನಾಭಿಪ್ರಾಯದಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಶಿವರಾಂ ಸೋಲಲು ಕಾರಣ ಎಂಬುದು ಸಾರ್ವಜನಿಕವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ ಬೇಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಕುಗ್ಗುತ್ತಿದೆ. ಸಾಕಷ್ಟು ಅನುಭವವಿರುವ ಬಿ.ಶಿವರಾಂ ನಾಯಕರನ್ನು ಒಗ್ಗೂಡಿಸಿ, ಹೊಂದಾಣಿಕೆಯಿಂದ ಕರೆದುಕೊಂಡು ಹೋಗುವಲ್ಲಿ ಎಡವುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದೆ.</p>.<p> <strong>ನಾನು ಪ್ರಬಲ ಆಕಾಂಕ್ಷಿ</strong></p><p> ಎ.ಆರ್. ಅಶೋಕ್ ವಿರುದ್ಧ ನ್ಯಾಯಾಲಯದ ಪ್ರಕರಣವನ್ನು ನಿಭಾಯಿಸು ನಿನ್ನನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಬಿ.ಶಿವರಾಂ ಸೈಯದ್ ತೌಫಿಕ್ ಹಾಗೂ ಎಂ.ಆರ್. ವೆಂಕಟೇಶ್ ಹೇಳಿದ್ದರು. ಆರೋಗ್ಯ ಸರಿ ಇಲ್ಲದಿದ್ದರೂ ಹೈಕೋರ್ಟ್ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿರುವೆ.</p><p> ಲಕ್ಷಾಂತರ ರೂಪಾಯಿ ವ್ಯಯವಾಗಿದೆ ಎಂದು ಕಾಂಗ್ರೆಸ್ ಸದಸ್ಯ ಬಿ.ಗಿರೀಶ್ ಹೇಳುತ್ತಿದ್ದಾರೆ. ನಾವು ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ವಿರುದ್ದ ಹೋರಾಡಿ ಈಗ ಅವರ ಜೊತೆ ಮೃತ್ರಿಯಿಂದ ಅಧಿಕಾರ ಹಿಡಿಯುವುದು ಪಕ್ಷದ ಬದ್ಧತೆ ತೋರಿಸುವುದಿಲ್ಲ. ಎರಡನೇ ಅವಧಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ನಾನು ಸಾಮಾನ್ಯ ವರ್ಗದವನಾಗಿದ್ದೇನೆ. ನನ್ನನ್ನೇ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಬೇಕು ನಾನು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>