ಜಿಲ್ಲಾ ಕ್ರೈಸ್ತ ಧರ್ಮ ಕೇಂದ್ರದ ಪ್ರಧಾನ ಗುರು ರೆವರೆಂಡ್ ರೋನಿ ಕರಡೋಜಾ ಮಾತನಾಡಿ, ‘ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿ ಜಿಲ್ಲೆಯ ಏಳು ಚರ್ಚ್ಗಳ ಅಭಿವೃದ್ಧಿಗೆ ಇದುವರೆಗೆ ₹7.20 ಕೋಟಿ ಮಂಜೂರಾಗಿದ್ದು, ₹6.11 ಕೋಟಿ ಬಿಡುಗಡೆಯಾಗಿದೆ. ಸರ್ಕಾರ ನೀಡಿದ ಎಲ್ಲ ಹಣವನ್ನು ಕ್ರಮಬದ್ಧವಾಗಿ ವಿನಿಯೋಗ ಮಾಡಲಾಗಿದೆ. ಆದರೆ ಫ್ರಾನ್ಸಿಸ್ ಕ್ಸೇವಿಯರ್ ₹15 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಚರ್ಚ್ನ ಪಾದ್ರಿ ಹಾಗೂ ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ’ ಎಂದರು.