ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳಿಗೆ ದೇಶದ ಇತಿಹಾಸ, ಸಂಸ್ಕಾರವನ್ನು ಹೇಳಿಕೊಡಬೇಕು. ಅದನ್ನು ಬಿಟ್ಟು ಅಕ್ಬರ್ ದಿ ಗ್ರೇಟ್ ಅನ್ನೋದು, ಇನ್ನೊಬ್ಬರು ದೇಶಕ್ಕೆ ತ್ಯಾಗ, ಬಲಿದಾನ ಮಾಡಿದ್ದಾರೆ ಎಂದು ವೈಭವೀಕರಿಸುವ ಕೆಲಸ ಹಿಂದಿನಿಂದಲೂ ಆಗಿತ್ತು. ಈಗ ದೇಶದ ಬಗ್ಗೆ, ಸಮಾಜದ ಬಗ್ಗೆ ಚಿಂತನೆ ಹೆಚ್ಚಿಸುವ ಕೆಲಸ ಪಠ್ಯಪರಿಷ್ಕರಣೆಯಿಂದ ಆಗುತ್ತಿದೆ ಎಂದು ಹೇಳಿದರು.