‘ಪಟ್ಟಣದಲ್ಲಿ ನಿರಂತರವಾಗಿ ಎರಡು ಕೊಲೆಗಳಾದವು. ನನ್ನ ವ್ಯಾಪ್ತಿಯಲ್ಲಿ ಇಷ್ಟೊಂದು ಅಪರಾಧ ಆಗುತ್ತಿದೆಯಲ್ಲ. ಮೇಲಧಿಕಾರಿಗಳಿಗೆ ಹೇಗೆ ಉತ್ತರಿಸಲಿ ಎಂದು ಮಾನಸಿಕ ಖಿನ್ನತೆಗೆ ಕಿರಣ್ಕುಮಾರ್ ಒಳಗಾಗಿ ದ್ದಾರೆ. ಆ ದಿನ ಅವರಿಗೆ 52 ಕರೆಗಳು ಬಂದಿವೆ. ರಾಜಕೀಯ ಮುಖಂಡರು, ಕಾರ್ಯಕರ್ತರು, ಪತ್ರಕರ್ತರು, ಸಂಬಂಧಿಕರು ಹಾಗೂ ಸ್ನೇಹಿತರು ಕರೆ ಮಾಡಿ ಕೊಲೆ ವಿಚಾರ ಕುರಿತಾಗಿಯೇ ಮಾತನಾಡಿದ್ದಾರೆ. ಕೊಲೆಯಾದ ಯುವಕನ ಸಂಬಂಧಿಕರು ಆರೋಪಿಗಳ ಶೀಘ್ರ ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಹಾಗಾಗಿಕಿರಣ್ಕುಮಾರ್ ಆತ್ಮಹತ್ಯೆಯ ನಿರ್ಧಾರ ಕೈಗೊಂಡರು’ ಎಂದು ಹೇಳಿದರು.