ಶಾಲಾ, ಕಾಲೇಜುಗಳ ಕುಂದು, ಕೊರತೆ ಆಲಿಸಿದ ಸಚಿವರು, ಕಟ್ಟಡ, ಶೌಚಾಲಯದ ಕೊರತೆ ಹಾಗೂ ಸಾರಿಗೆ ಸಂಸ್ಥೆ ಬಸ್ ಗಳ ಸಂಚಾರದಲ್ಲಿ ವ್ಯತ್ಯಯವಾಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಎಲ್ಲಾ ಶಾಲಾ, ಕಾಲೇಜು ಮುಖ್ಯಸ್ಥರಿಂದ ವೈಯಕ್ತಿಕವಾಗಿ ಬೇಡಿಕೆ ವಿವರ ಪಡೆದ ಸಚಿವರು, ಅಗತ್ಯಕ್ಕೆ ಅನುಗುಣವಾಗಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.