ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಹುಣಸಿನಕೆರೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ‘ಕುಮಾರಸ್ವಾಮಿ ಅವರು ಹಾಸನ, ಹೊಳೆನರಸೀಪುರ, ಮಂಡ್ಯಕಷ್ಟೇ ಸೀಮಿತ ಅಂದುಕೊಂಡಿದ್ದೇವು. ಪಾಕಿಸ್ತಾನದ ವರೆಗೂ ಸಂಬಂಧ ಬೆಳೆಸಿದ್ದಾರೆ. ಐಟಿ ದಾಳಿಯ ಮಾಹಿತಿ ದೊರೆತ ತಕ್ಷಣ ಮಾಧ್ಯಮಕ್ಕೆ ತಿಳಿಸಿದರು. ಅದೇ ರೀತಿ ಪುಲ್ವಾಮ ದಾಳಿ ವಿಚಾರವನ್ನು ಏಕೆ ಬಹಿರಂಗ ಪಡಿಸಲಿಲ್ಲ’ ಎಂದು ಲೇವಡಿ ಮಾಡಿದರು.