ನಗರದ ಹೊರವಲಯದ ನಾರಿಹಳ್ಳಿಯ ಗವಿಗೌಡ (23) ಹತ್ಯೆಯಾದ ಯುವಕ. ಆಂದ್ರಪ್ರದೇಶದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದ ಗವಿಗೌಡ ಲಾಕ್ಡೌನ್ ಬಳಿಕ ಊರಿಗೆ ವಾಪಸ್ ಆಗಿ, ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಪಕ್ಕದ ಎಚ್.ಡಿ. ದೇವೇಗೌಡ ನಗರದ ಸ್ನೇಹಿತ ಕೃಷ್ಣ ಎಂಬಾತ ಕೆಲಸದ ನಿಮಿತ್ತ ಸೋಮವಾರ ಮಧ್ಯಾಹ್ನ ಗವಿಗೌಡನ ಬೈಕ್ ಪಡೆದು ಹೋಗಿದ್ದ. ಕೆಲಸ ಮುಗಿಸಿ ಸಂಜೆ ಬೈಕ್ ಹಿಂತಿರುಗಿಸಿದ ವೇಳೆ ಬೈಕ್ನ ಕೆಲ ಭಾಗ ಸಣ್ಣ ಪುಟ್ಟ ಹಾನಿಯಾಗಿತ್ತು. ಬೈಕ್ ರಿಪೇರಿ ಮಾಡಿಸಿ ಕೊಡುವಂತೆ ಪಟ್ಟು ಹಿಡಿದ, ಇದಕ್ಕೆ ಗವಿಗೌಡ ಒಪ್ಪಲಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯಿತು.