ವಿಶ್ವೇಶ್ವರ ನಗರದ 1ನೇ ಕ್ರಾಸ್ನಲ್ಲಿ ವಾಸವಾಗಿದ್ದ, ಹಾಸನ ರೈಲ್ವೆ ಸ್ಟೇಷನ್ನಲ್ಲಿ ಟೆಕ್ನಿಷಿಯನ್ ಆಗಿದ್ದ
ಕೇರಳದ ಶಾಂತಿಭೂಷಣ್ ಎಂಬುವರು ಜ.20ರ ರಾತ್ರಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಎನ್ಟಿಪಿಸಿ ಪರೀಕ್ಷೆ
ಬರೆಯಲು ಮಂಗಳೂರಿಗೆ ತೆರಳ ಬೇಕಿತ್ತು. ಜ್ಞಾನಾಕ್ಷಿ ಕಲ್ಯಾಣ ಮಂಟಪದ ಹಿಂಭಾಗ ಹಾದು ಹೋಗಿರುವ
ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಮೂವರು ಬಂದು ಏಕಾಏಕಿ ದಾಳಿ ನಡೆಸಿ
ಚಾಕುವಿನಿಂದ ಶಾಂತಿಭೂಷಣ್ ಕೈಗೆ ಚುಚ್ಚಿ ₹10 ಸಾವಿರ ನಗದು, ಎಂ.ಐ ಮೊಬೈಲ್ ಫೋನ್, ಪಾನ್
ಕಾರ್ಡ್, ವೋಟರ್ ಐಡಿ, ರೈಲ್ವೆ ಪಾಸ್, ಎನ್ಟಿಸಿಪಿ ಹಾಲ್ ಟಿಕೆಟ್ ಇದ್ದ ಬ್ಯಾಗ್ ಕಿತ್ತು ಪರಾರಿಯಾಗಿದ್ದರು.