ವಸತಿ ರಹಿತರು, ಜೀತ ವಿಮುಕ್ತರಿಗೆ ಆದಷ್ಟು ಶೀಘ್ರ ಪುನರ್ವಸತಿ ಕಲ್ಪಿಸಬೇಕಿದ್ದು, ಸೂಕ್ತ ಜಾಗ ಗುರುತಿಸಬೇಕಾಗಿದೆ. ಅದಕ್ಕಾಗಿ ದೊಡ್ಡಮಟ್ಟದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಪ್ರಕರಣಗಳನ್ನು ಪತ್ತೆ ಮಾಡಿ, ತೆರವುಗೊಳಿಸಿ ಜಮೀನು ಒದಗಿಸಲು ಪ್ರಯತ್ನ ಮಾಡಬೇಕು ಎಂದು ಸಮಿತಿ ಸದಸ್ಯರಾದ ಮರಿ ಜೋಸೆಫ್, ವಿಜಯಕುಮಾರ್, ಈರಪ್ಪ, ಕೃಷ್ಣದಾಸ್, ನಾರಾಯಣದಾಸ್, ಹೂರಾಜ್ ಮನವಿ ಮಾಡಿದರು.ಈ ಬಗ್ಗೆ ಪರಿಶೀಲಿಸಿ ವರದಿ ಪಡೆದು ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.