ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಪ್ರೀತಂ, ‘ ನಿಮಗೆ (ಜೆಡಿಎಸ್ಗೆ) ಮತ ಹಾಕುತ್ತೇವೆ ಎಂದು ಹೇಳಿ ಹಣ ತೆಗೆದುಕೊಂಡು ಕೊನೆಗೆ ಬಿಜೆಪಿಗೆ ಮತ ಹಾಕಿ. ಈಗಲೇ ಪ್ರಜ್ವಲ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಏಕವಚನದಲ್ಲಿ ಮಾತನಾಡಿಸುತ್ತಾನೆ. ಕಾರ್ಯಕರ್ತರಿಗೆ ಬೆಲೆ ಕೊಡಲ್ಲ. ಜೆಡಿಎಸ್ ಕಾರ್ಯಕರ್ತರಿಗೆ ಕೆಲಸ ಸಿಗಬೇಕಾದರೆ, ಗೌರವ ದೊರೆಯಬೇಕಾದರೆ ಆತನನ್ನು ಸೋಲಿಸಬೇಕಿದೆ. ಈ ಚುನಾವಣೆಯಲ್ಲೂ ಅವರೇ ಗೆದ್ದರೆ ಕಾರ್ಯಕರ್ತರ ಕಥೆ ಮುಗಿತು’ ಎನ್ನುವ ಮೂಲಕ ಜೆಡಿಎಸ್ ಕಾರ್ಯಕರ್ತರನ್ನು ಸೆಳೆಯವುದು ಹೇಗೆ ಎಂದು ಶಾಸಕರು ತಂತ್ರದ ಪಾಠ ಹೇಳಿದ್ದಾರೆ.