‘ಎಚ್.ಎಂ.ರವಿಕುಮಾರ್ ಎಂಬಾತ ಹೊಳೆನರಸೀಪುರ ಪಟ್ಟಣ ನಿವಾಸಿಯಾಗಿದ್ದರೂ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಅದೇ ರೀತಿ ನಿಸಾರ್ ಅಹಮದ್ , ಪಿ.ಟಿ.ಪುರುಷೋತ್ತಮ್ ಎಂಬುವರು ಮತದಾನ ಮಾಡಿದ್ದಾರೆ. ಈ ರೀತಿಯ ಅನೇಕ ನಿದರ್ಶನಗಳು ಕಣ್ಣು ಮುಂದೆಯೇ ನಡೆದರೂ ಚುನಾವಣಾ ಅಧಿಕಾರಿ ಪ್ರೇಕ್ಷಕರಾಗಿದ್ದರು. ಈ ಪ್ರಕರಣವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಮತಗಟ್ಟೆ ಸಂಖ್ಯೆ 244ರ ಅಂದಿನ ವಿಡಿಯೊ ದೃಶ್ಯಾವಳಿ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿ ಹಾಗೂ ರೇವಣ್ಣ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.