<p><strong>ಸಕಲೇಶಪುರ:</strong> ಮುಂಗಾರಿನ ತಂಪು ಗಾಳಿ, ಮಲೆನಾಡಿನ ಪ್ರಶಾಂತ ವಾತಾವರಣ, ಸಾಕ್ಷಿಯಾಗಿ ನಿಂತ ನಾಡಪ್ರಭು ಕೆಂಪೇಗೌಡರ ಪ್ರತಿಮೆ.</p>.<p>ಇಂತಹದೊಂದು ರಮ್ಯ ಸಂಜೆಯ ಮಂದ ಬೆಳಕಿನಲ್ಲಿ ಸಕಲೇಶಪುರದ ಕವಿಹೃದಯಗಳು ಕಾವ್ಯದ ಇಂಪು ಹರಿಸಿದವು.</p>.<p>‘ಡ್ರಗ್ಸ್ ಮುಕ್ತ ಸಕಲೇಶಪುರ’ ಆಂದೋಲನದ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ‘ಮುಂಗಾರು ಕವಿಗೋಷ್ಠಿ’ಯು ಕೇವಲ ಸಾಹಿತ್ಯದ ಸಂಜೆಯಾಗದೆ, ಸಮಾಜ ಕಾಡುತ್ತಿರುವ ಮಾದಕ ವಸ್ತುವಿನ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ಶಕ್ತಿಯುತ ಕಾವ್ಯಧಾರೆಯಾಗಿ ಮಾರ್ಪಟ್ಟಿತ್ತು.</p>.<p>ಭಾವನಾತ್ಮಕ ಕಾವ್ಯ ಸಂಜೆಯಲ್ಲಿ ಕವಿಗಳಾದ ಕೀರ್ತಿ ಕಿರಣ್, ಪುಷ್ಪಾ ಲಕ್ಷ್ಮಣ್, ಪ್ರಜ್ವಲ್, ಡಯಾನಾ ಡಿಸೋಜ, ಮಲ್ಲೇಶ್, ಜ್ಯೋತಿ, ತಾಸೀನಾ ರಜಾಕ್, ಯಾಸ್ಮಿನ್ ರಿಯಾಜ್ ಮಲ್ನಾಡ್ ಮೆಹಬೂಬ್ ಸಾಯಿರ ಬಾನು ಅವರು ತಮ್ಮ ಮನೋಜ್ಞ ಕವನಗಳ ಮೂಲಕ ಕಾವ್ಯಲೋಕದಲ್ಲಿ ತೇಲಿಸಿದರು.</p>.<p>ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ‘ಇಂದಿನ ಯುವ ಪೀಳಿಗೆಯನ್ನು ತಪ್ಪು ಹಾದಿಗೆ ಎಳೆಯುತ್ತಿರುವ ಮಾದಕ ವಸ್ತುಗಳ ವ್ಯಸನದ ವಿರುದ್ಧ ಇಂತಹ ಸಾಂಸ್ಕೃತಿಕ ಆಂದೋಲನಗಳು ನಿರಂತರವಾಗಿ ನಡೆಯಬೇಕು’ ಎಂದು ಹೇಳಿದರು.</p>.<p>‘ಸಕಲೇಶಪುರವನ್ನು ಸಂಪೂರ್ಣವಾಗಿ ಡ್ರಗ್ಸ್ ಮುಕ್ತ ತಾಲ್ಲೂಕನ್ನಾಗಿ ಮಾಡಲು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ಕೈಜೋಡಿಸಬೇಕಾದ ಅನಿವಾರ್ಯತೆ ಇದೆ’ ಎಂದು ಕರೆ ನೀಡಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಜೈ ಮಾರುತಿ ದೇವರಾಜ್ ಅವರು, ಅಕ್ಷರ ಕೃಷಿ ಮಾಡಿದ ಕವಿಗಳಿಗೆ ನೆನಪಿನ ಕಿರು ಕಾಣಿಕೆ ನೀಡಿ ಗೌರವಿಸಿದರು. ಪತ್ರಕರ್ತ ಅಕ್ಬರ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-36-1670284235</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ:</strong> ಮುಂಗಾರಿನ ತಂಪು ಗಾಳಿ, ಮಲೆನಾಡಿನ ಪ್ರಶಾಂತ ವಾತಾವರಣ, ಸಾಕ್ಷಿಯಾಗಿ ನಿಂತ ನಾಡಪ್ರಭು ಕೆಂಪೇಗೌಡರ ಪ್ರತಿಮೆ.</p>.<p>ಇಂತಹದೊಂದು ರಮ್ಯ ಸಂಜೆಯ ಮಂದ ಬೆಳಕಿನಲ್ಲಿ ಸಕಲೇಶಪುರದ ಕವಿಹೃದಯಗಳು ಕಾವ್ಯದ ಇಂಪು ಹರಿಸಿದವು.</p>.<p>‘ಡ್ರಗ್ಸ್ ಮುಕ್ತ ಸಕಲೇಶಪುರ’ ಆಂದೋಲನದ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ‘ಮುಂಗಾರು ಕವಿಗೋಷ್ಠಿ’ಯು ಕೇವಲ ಸಾಹಿತ್ಯದ ಸಂಜೆಯಾಗದೆ, ಸಮಾಜ ಕಾಡುತ್ತಿರುವ ಮಾದಕ ವಸ್ತುವಿನ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ಶಕ್ತಿಯುತ ಕಾವ್ಯಧಾರೆಯಾಗಿ ಮಾರ್ಪಟ್ಟಿತ್ತು.</p>.<p>ಭಾವನಾತ್ಮಕ ಕಾವ್ಯ ಸಂಜೆಯಲ್ಲಿ ಕವಿಗಳಾದ ಕೀರ್ತಿ ಕಿರಣ್, ಪುಷ್ಪಾ ಲಕ್ಷ್ಮಣ್, ಪ್ರಜ್ವಲ್, ಡಯಾನಾ ಡಿಸೋಜ, ಮಲ್ಲೇಶ್, ಜ್ಯೋತಿ, ತಾಸೀನಾ ರಜಾಕ್, ಯಾಸ್ಮಿನ್ ರಿಯಾಜ್ ಮಲ್ನಾಡ್ ಮೆಹಬೂಬ್ ಸಾಯಿರ ಬಾನು ಅವರು ತಮ್ಮ ಮನೋಜ್ಞ ಕವನಗಳ ಮೂಲಕ ಕಾವ್ಯಲೋಕದಲ್ಲಿ ತೇಲಿಸಿದರು.</p>.<p>ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ‘ಇಂದಿನ ಯುವ ಪೀಳಿಗೆಯನ್ನು ತಪ್ಪು ಹಾದಿಗೆ ಎಳೆಯುತ್ತಿರುವ ಮಾದಕ ವಸ್ತುಗಳ ವ್ಯಸನದ ವಿರುದ್ಧ ಇಂತಹ ಸಾಂಸ್ಕೃತಿಕ ಆಂದೋಲನಗಳು ನಿರಂತರವಾಗಿ ನಡೆಯಬೇಕು’ ಎಂದು ಹೇಳಿದರು.</p>.<p>‘ಸಕಲೇಶಪುರವನ್ನು ಸಂಪೂರ್ಣವಾಗಿ ಡ್ರಗ್ಸ್ ಮುಕ್ತ ತಾಲ್ಲೂಕನ್ನಾಗಿ ಮಾಡಲು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ಕೈಜೋಡಿಸಬೇಕಾದ ಅನಿವಾರ್ಯತೆ ಇದೆ’ ಎಂದು ಕರೆ ನೀಡಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಜೈ ಮಾರುತಿ ದೇವರಾಜ್ ಅವರು, ಅಕ್ಷರ ಕೃಷಿ ಮಾಡಿದ ಕವಿಗಳಿಗೆ ನೆನಪಿನ ಕಿರು ಕಾಣಿಕೆ ನೀಡಿ ಗೌರವಿಸಿದರು. ಪತ್ರಕರ್ತ ಅಕ್ಬರ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-36-1670284235</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>