ವಿವರ: ರಾಮನಾಥಪುರ ನಿವಾಸಿ ಜಾನಿ ಬಿನ್ ಮಣಿ ಅವರು ರಾಮೇಶ್ವರ ದೇವಸ್ಥಾನದ ಬಳಿಯಲ್ಲಿ ನಿತ್ಯ ಭಿಕ್ಷೆ ಬೇಡುತ್ತಿದ್ದು ಶನಿವಾರ ಕೊಣನೂರು ಹೋಬಳಿಯ ಅರಸೀಕಟ್ಟೆಯಮ್ಮ ದೇವಾಲಯದ ಬಳಿ ಬಳಿ ಭಿಕ್ಷೆ ಬೇಡುವುದನ್ನು ಕಂಡು ಸ್ಥಳಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಹೋಗಿ ಜಾನ್ ಅವರನ್ನು ಮಾತನಾಡಿಸಿದರು. ಆತನಿಗೆ ಯಾವುದೇ ವೇತನ ಬರುತಿಲ್ಲ ಎಂಬುದಾಗಿ ತಿಳಿದ ತಕ್ಷಣ ಅಲ್ಲಿಂದಲೇ ಆಟೊ ಮೂಲಕ ರಾಮನಾಥಪುರ ನಾಡ ಕಚೇರಿಗೆ ಕರೆತಂದಿದ್ದಾರೆ.