ಹಾಸನ: ನಗರ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದಆಚರಿಸಲಾಯಿತು.
ಮಹಿಳೆಯರು, ಹೆಣ್ಣು ಮಕ್ಕಳು ಮನೆಯ ಆವರಣ ಸ್ವಚ್ಛಗೊಳಿಸಿ ಅಂದವಾದ ರಂಗೋಲಿ ಬಿಡಿಸಿದರು.ಬಾಗಿಲುಗಳಿಗೆ ತೋರಣ ಕಟ್ಟಿ ಸಿಂಗರಿಸಿದರು. ಮಕ್ಕಳು, ಹಿರಿಯರು ಹೊಸಬಟ್ಟೆ ಧರಿಸಿ ಎಳ್ಳು–ಬೆಲ್ಲ ಬೀರಿ ಶುಭಾಶಯ ಕೋರಿದರು.
ನಗರದ ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಲು ಸಾಲುಗಟ್ಟಿನಿಂತಿದ್ದರು. ಎಳ್ಳು, ಬೆಲ್ಲದ ಮಿಶ್ರಣ ಸಿಹಿ ಪೋಂಗಲ್ ನ್ನು ದೇವರಿಗೆ ನೇವೈದ್ಯವಾಗಿ ಅರ್ಪಿಸಲಾಯಿತು.ರಿಂಗ್ ರೋಡ್ನಲ್ಲಿರುವ ಚಾಮುಂಡೇಶ್ವರಿ ದೇವಿಗೆ ಹೂವು ಮತ್ತು ತರಕಾರಿಗಳಿಂದ ಅಲಂಕಾರ ಮಾಡಲಾಗಿತ್ತು.ಮನೆಗಳಲ್ಲಿ ಪೂಜೆಯ ಸಂಭ್ರಮ ಮನೆ ಮಾಡಿತ್ತು.
ಗ್ರಾಮೀಣ ಭಾಗದಲ್ಲಿ ಗೋವುಗಳನ್ನು ತೊಳೆದು ವಿಶೇಷವಾಗಿ ಸಿಂಗರಿಸಲಾಗಿತ್ತು. ಮೈಗೆ ಅರಿಶಿಣ ಬಣ್ಣ ಹಾಗೂಕೊಂಬುಗಳನ್ನು ಬಣ್ಣ ಬಣ್ಣದ ಕಾಗದಗಳಿಂದ ಅಲಂಕರಿಸಲಾಗಿತ್ತು. ಗೋಪೂಜೆ ಮಾಡಿ, ನೈವೇದ್ಯಅರ್ಪಿಸಿದರು. ಮನೆಗಳಲ್ಲಿ ಪೊಂಗಲ್, ಕಡುಬು, ಪಾಯಸ ತಯಾರಿಸಿ ಸವಿದರು.