ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ರೌಡಿಗಳ ಗಡಿಪಾರು: ಶಾಂತಿಯುತ ಚುನಾವಣೆ ನಡೆಸಲು ಡಿ.ಸಿ ಆದೇಶ

Last Updated 8 ಏಪ್ರಿಲ್ 2019, 14:45 IST
ಅಕ್ಷರ ಗಾತ್ರ

‌ಹಾಸನ: ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಶಾಂತಿಯುತ ಚುನಾವಣೆ ನಡೆಸುವ ಹಿನ್ನಲೆಯಲ್ಲಿ ಏಳು ಮಂದಿ ರೌಡಿಗಳನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಆದೇಶ ಹೊರಡಿಸಿದ್ದಾರೆ.

ಸಕಲೇಶಪುರದ ಸರಸ್ವತಿಪುರಂ ನಿವಾಸಿ ಧರ್ಮೇಶ್ (40), ಎಸ್.ಪಿ.ರಸ್ತೆಯ ಗುರುಮೂರ್ತಿ (35), ಕುಶಾಲನಗರ ಬಡಾವಣೆಯ ಹೌಸಿಂಗ್‌ ಬೋರ್ಡ್ ನಿವಾಸಿ ಮಲ್ನಾಡ್ ಮೆಹಬೂಬ್(41), ಮುಫೀಜ್ (44), ಲಕ್ಷ್ಮೀಪುರಂ ಬಡಾವಣೆಯ ರಘು (35) , ಹಾಸನದ ವಿಜಯನಗರ ಬಡಾವಣೆಯ ಕೆ.ಎಂ.ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ (34) ಹಾಗೂ ಶಾಂತಿಗ್ರಾಮ ಹೋಬಳಿ ಸಮುದ್ರವಳ್ಳಿಯ ಸಂತೋಷ್ ಅಲಿಯಾಸ್ ಸಂತು ( 32) ಎಂಬುವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ‍ಪೊಲೀಸ್‌ ವರಿಷ್ಠಾಧಿಕಾರಿ ಶಿಫಾರಸ್ಸು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT