ಮೈಸೂರು ದಕ್ಷಿಣ ವಲಯ ಮುಖ್ಯ ಎಂಜಿನಿಯರ್ ವ್ಯಾಪ್ತಿಯ (ಮಂಡ್ಯ, ಮೈಸೂರು, ಕೊಡಗು ಜಿಲ್ಲೆ) ಕೆಆರ್ಎಸ್, ಕಬಿನಿ, ಹಾರಂಗಿ ಯೋಜನೆಗಳ ₹ 5 ಸಾವಿರ ಕೋಟಿ, ಹೇಮಾವತಿ ವಲಯ ಎಂಜಿನಿಯರ್ ಕಚೇರಿ ವ್ಯಾಪ್ತಿಯ (ಹಾಸನ, ಮಂಡ್ಯ ಜಿಲ್ಲೆ) ಯಲ್ಲಿ ₹ 1,150 ಕೋಟಿ ಹಾಗೂ ತುಮಕೂರು ನಾಲಾ ವಲಯ ಮುಖ್ಯ ಎಂಜಿನಿಯರ್ ವ್ಯಾಪ್ತಿಯಲ್ಲಿ ₹ 500 ಕೋಟಿ ಕಾಮಗಾರಿಗೆ ತಡೆ ನೀಡಿದ್ದಾರೆ. ಇದಕ್ಕೆ ಹೆದರಿ ಓಡಿ ಹೋಗುವುದಿಲ್ಲ. ಸನ್ನಿವೇಶ ಬಂದರೆ ವಿಧಾನಸಭೆಯಲ್ಲಿ ಮಲಗುತ್ತೇನೆ. ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಬಿಎಸ್ವೈಗೆ ತಿರುಗು ಬಾಣವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.