ಶತಚಂಡಿಕಾಯಾಗದ ಪೂರ್ಣಾಹುತಿಗೆ ಚಾಲನೆ ನೀಡಿದ ಆಶ್ರಮದ ಅವಧೂತರಾದ ಸತೀಶ್ ಶರ್ಮಾ ಗುರೂಜಿ ಮಾತನಾಡಿ, ‘ಪ್ರತಿವರ್ಷ ಶರನ್ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಕಡಿಮೆ ಭಕ್ತರ ಸಮ್ಮುಖದಲ್ಲಿ ಆಚರಿಸಲಾಯಿತು. ಈ ಬಾರಿ ಕೊರೊನಾ ಸೋಂಕು ನಿಗ್ರಹಕ್ಕೆ ಶತಚಂಡಿಕಾ ಯಾಗ ಆರಂಭಿಸಲಾಗಿತ್ತು, ಶೀಘ್ರವೇ ಕೊರೊನಾದಿದ ರಾಜ್ಯದ ಜನತೆಗೆ ಮುಕ್ತಿ ದೊರೆಯುವಂತಾಗಲಿ’ ಎಂದರು.