ನವದೆಹಲಿ: ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯ ವಿಮಾನವು ‘ಟೇಕ್ ಆಫ್’ ಆದ ಕೆಲವೇ ಸಮಯದಲ್ಲಿ ದೆಹಲಿಗೆ ಹಿಂತಿರುಗಿದ್ದು, ತಾಂತ್ರಿಕ ತೊಂದರೆ ಕಾರಣ ಭಾನುವಾರ ಬೆಳಿಗ್ಗೆ ತುರ್ತು ಭೂ ಸ್ಪರ್ಶ ಮಾಡಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
180 ಪ್ರಯಾಣಿಕರಿದ್ದ ಎಐ–825 ವಿಮಾನ ಬೆಳಿಗ್ಗೆ 10.15ಕ್ಕೆ ಪ್ರಯಾಣ ಆರಂಭಿಸಿತ್ತು. ತಾಂತ್ರಿಕ ತೊಂದರೆಯ ಕಾರಣ ದೆಹಲಿಗೆ ಹಿಂದಿರುಗಿದ್ದು, ಬೆಳಿಗ್ಗೆ 10.55ಕ್ಕೆ ಸುರಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.
ತಾಂತ್ರಿಕ ಸಮಸ್ಯೆಯ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಯಾಣಿಕರನ್ನು ಬೇರೊಂದು ವಿಮಾನದಲ್ಲಿ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.