ಪೋಷಕರ ಶ್ರಮ, ತ್ಯಾಗ ಹಾಗೂ ಸಮಯವನ್ನು ಒಂದಿಷ್ಟೂ ವ್ಯರ್ಥವಾಗಲು ಬಿಡಬಾರದು. ಬದುಕಿನ ಗುರಿ ಸ್ಪಷ್ಟವಾಗಿದ್ದರೆ ಏಕಾಗ್ರತೆ, ಶಿಸ್ತು ತನ್ನಿಂತಾನೇ ರೂಪುಗೊಳ್ಳುತ್ತದೆ. ವಿದ್ಯಾರ್ಥಿಗಳು ಜ್ಞಾನ ಪಿಪಾಸುಗಳಾಗಬೇಕು. ಜ್ಞಾನದ ಸರಿಯಾದ ಬಳಕೆಯೇ ಶಕ್ತಿ. ವಿಜ್ಞಾನ ಸುಖ ನೀಡಿದರೆ, ಅಧ್ಯಾತ್ಮ ಸಂತೋಷ ಉಂಟು ಮಾಡುತ್ತದೆ. ಇವೆರಡರ ಸಮ್ಮಿಲನವಾದರೆ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.