ಶಿವರಾತ್ರಿ ಆಚರಣೆಗೆ ಧರ್ಮಸ್ಥಳಕ್ಕೆ ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಶಿರಾಡಿ ಘಾಟ್ ಮಾರ್ಗವಾಗಿ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ. ‘ಅಡುಗೆ ಕೋಣೆ, ಶೌಚಾಲಯ, ಸ್ನಾನಕ್ಕೆದರ್ಗಾದ ಸಮುದಾಯ ಭವನವನ್ನು ಪಾದಯಾತ್ರಿಗಳು ಬಳಸಿಕೊಳ್ಳಬಹುದು’ ಎಂದು ದರ್ಗಾ ಆಡಳಿತ ಮಂಡಳಿ ಫಲಕ ಹಾಕಿದೆ. ಆದರೆ, ಇದುವರೆಗೂ ಯಾರೂ ಭವನದ ಸೌಲಭ್ಯವನ್ನು ಬಳಸಿಕೊಂಡಿಲ್ಲ.