ಹಾಸನದಲ್ಲಿ ಹಲವು ಬಾರಿ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರನ್ನು ತಮ್ಮ ಗುರುಗಳು ಅವರ ಅಣತಿಯಂತೆ ನಡೆಯುವೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳುತ್ತಿದ್ದ ಮಂಜು, ಇಂದು ಗುರುವಿಗೆ ತಿರುಮಂತ್ರ ಹಾಕಿದ್ದಾರೆ. ದೇವೇಗೌಡರ ನೆಪವೂಡ್ಡಿ ಬಿಜೆಪಿ ಪಕ್ಷ ಸೇರಿರುವ ಮಂಜು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದು ತಪ್ಪು.ಅವರ ಮಗ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಆಗಿದ್ದಾರೆ. ಹೀಗಿರುವಾಗ ಗೌಡರ ಕುಟುಂಬ ರಾಜಕಾರಣ ಟೀಕಿಸಲು ಅವರಿಗೆ ಹಕ್ಕಿಲ್ಲ ಎಂದು ನುಡಿದರು.