ಜಿಲ್ಲೆಯ 45 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗುತ್ತಿದ್ದ ಆಲೂಗಡ್ಡೆ ಕಳಪೆ ಬಿತ್ತನೆ ಬೀಜ, ಬೆಲೆ ಏರಿಕೆ ಹಾಗೂ ಅಂಗಮಾರಿ ಕಾಯಿಲೆಯಿಂದ 9 ಸಾವಿರ ಹೆಕ್ಟೇರ್ಗೆ ಇಳಿದಿದೆ. ಬಿತ್ತನೆ ಬೀಜದಲ್ಲಿ ಉತ್ತರದ ರಾಜ್ಯಗಳನ್ನು ಅವಲಂಬಿಸಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ತೋಟಗಾರಿಕೆ ಇಲಾಖೆ, ಸೋಮನಹಳ್ಳಿ ಕಾವಲು ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ, ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಅಂಗಾಂಶ ಕೃಷಿ ಮೂಲಕ ಬಿಜೋತ್ಪಾದನೆ ನಡೆಸಿದ್ದು, ವರ್ಷ 30 ರೈತರಿಗೆ ಪ್ರಾಯೋಗಿಕವಾಗಿ ಬಿತ್ತನೆ ಬೀಜ ನೀಡಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.