ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಿಜೆಪಿ ಸರ್ಕಾರ ರಚನೆಗೆ ನಮ್ಮ ಸಹಕಾರ ಸಾಕಷ್ಟಿದೆ ಎಂದು ಮೂಲ ಬಿಜೆಪಿಗರೇ ಹೇಳುತ್ತಿದ್ದು, ಸರ್ಕಾರದಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಅವರೇ ಬಯಸಿದ್ದಾರೆ. ಕೊಟ್ಟ ಮಾತಿನಂತೆ ಸಿಎಂ ಯಡಿಯೂರಪ್ಪ ಎಲ್ಲರಿಗೂ ನ್ಯಾಯ ಕಲ್ಪಿಸಿದ್ದಾರೆ. ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್, ರೋಷನ್ ಬೇಗ್ ಹಾಗೂ ಎಲ್. ಶಂಕರ್ ಅವರಿಗೆ ಯಾವುದಾದರೂ ಸ್ಥಾನಮಾನ ದೊರೆಯುತ್ತದೆ. ಮುನಿರತ್ನ ಹಾಗೂ ಪ್ರತಾಪ ಗೌಡ ಅವರ ಶಾಸಕ ಸ್ಥಾನದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ಮುನಿರತ್ನ ಕೇಸಿನಿಂದ ಹೊರ ಬಂದಿದ್ದಾರೆ. ಅವರಿಗೂ ಒಳ್ಳೆಯದಾಗುತ್ತದೆ ಎಂದರು.