ತಾಲ್ಲೂಕಿನ ರಾಜಕುಮಾರ್ ನಗರ, ಅಣಚನಹಳ್ಳಿ, ತಟ್ಟೆಕೆರೆ ಗ್ರಾಮಗಳಲ್ಲಿ ಮಳೆ ಹಾನಿ ವೀಕ್ಷಿಸಿದ ಅವರು, ಸಂಪೂರ್ಣ, ಭಾಗಶಃ ಹಾನಿಗೊಳಗಾದ ಮನೆಗಳಿಗೆ ಸರ್ಕಾರದಿಂದ ನೀಡಬಹುದಾದ ಪರಿಹಾರವನ್ನು ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶೀಘ್ರವಾಗಿ ಕೊಡಲು ಕ್ರಮ ವಹಿಸಲಾಗುವುದು. ವಸತಿ ಕಳೆದುಕೊಂಡವರಿಗೆ ವಸತಿ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.