ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳಾಗಿ ವೈದ್ಯೆ ಡಾ.ಎ.ಸಾವಿತ್ರಿ (ಗೌರವಾಧ್ಯಕ್ಷೆ), ಅರಕಲಗೂಡು ಪಿಇಎಸ್ ಐಟಿಐನ ಪ್ರಾಂಶುಪಾಲ ಎಚ್.ಟಿ.ಗುರುರಾಜು (ಅಧ್ಯಕ್ಷ), ಬೇಲೂರಿನ ನಿವೃತ್ತ ಶಿಕ್ಷಕಿ ಸಿ.ಸೌಭಾಗ್ಯ, ನಿಟ್ಟೂರಿನ ವೈದ್ಯಾಧಿಕಾರಿ ಡಾ.ಎಚ್.ಜಿ.ಮಂಜುನಾಥ್, ಆಲೂರು ತಾಲ್ಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರಮೀಳಾ. ಸಮಾಜ ಸೇವಕಿ ಮಮತಾ ಶಿವು (ಉಪಾದ್ಯಕ್ಷರು), ಸಿದ್ದೇಶ್ವರ ಐಟಿಐ ಉಪನ್ಯಾಸಕ ಅಹಮದ್ ಹಗರೆ (ಕಾರ್ಯದರ್ಶಿ), ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ಕೆ.ವಿ.ಕವಿತಾ, ಅರ್ಜುನಶೆಟ್ಟಿ, ನಾಗೇಶ್ (ಜಂಟಿ ಕಾರ್ಯದರ್ಶಿಗಳು) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.