ಇಂದಿನ ಸ್ಥಿತಿ ನೋಡಿದಾಗ ಪ್ರಾಚೀನ ಶಿಕ್ಷಣ ವ್ಯವಸ್ಥೆ ನೆನಪಾಗುತ್ತದೆ. ಹಿಂದೆ ಶಿಕ್ಷಣ ಕೇಂದ್ರಗಳಾಗಿ ದೇವಾಲಯಗಳು, ಮಠಮಂದಿ ರಗಳು, ಚರ್ಚ್, ಮದರಸಗಳು ಕಾರ್ಯನಿರ್ವಹಿಸುತ್ತಿದ್ದವು. ಅತ್ಯಂತ ಆಧುನಿಕತೆಗೆ ಜಾರಿ ಹೋಗುತ್ತಿದ್ದ ಶಿಕ್ಷಣ ವ್ಯವಸ್ಥೆಯು ಕೊರೊನಾದ ಕಾರಣದಿಂದ ಪ್ರಾಚೀನ ಕಾಲದ ಸ್ಥಿತಿಗೆ ಮರಳಿದಂತಾಗಿದೆ. 21ನೇ ಶತಮಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಯುವಜನರು ಹೋಗುವುದನ್ನು ತಡೆಯಲು ಪ್ರಕೃತಿಯೇ ರೂಪಿಸಿದ ವ್ಯವಸ್ಥೆ ಎಂದೇ ಭಾವಿಸುವಂತಾಗಿದೆ ಎನ್ನುತ್ತಾರೆ ವಕೀಲ ಆರ್.ಬಿ.ಸುರೇಶ್.