ಹಿರೀಸಾವೆಯಿಂದ ಚನ್ನರಾಯ ಪಟ್ಟಣ, ಹಾಸನ, ಹೊಳೆನರಸೀಪುರ ಮತ್ತುಬಿ.ಜಿ.ನಗರದ ಕಾಲೇಜುಗಳಿಗೆ ವಿದ್ಯಾರ್ಥಿಗಳು ನಿತ್ಯ ಸಾರಿಗೆ ಬಸ್ಮೂಲಕ ಪ್ರಯಾಣಿಸುತ್ತಾರೆ. ಕೆಲ ಬಸ್ಗಳು ನಿಲ್ಲಿಸುವುದಿಲ್ಲ. ನಿಲ್ಲಿಸುವ ಬಸ್ಹತ್ತಲುನೂಕುನುಗ್ಗಲು ಉಂಟಾಗುತ್ತದೆ. ಈ ವೇಳೆ ಗುಂಪಿನಲ್ಲಿ ಕೆಲವರ ಪರ್ಸ್ಗಳ ಕಳ್ಳತನವಾಗಿದೆ. ಕೆಲವರು ಬಿದ್ದು ಗಾಯಗೊಂಡಿರುವ ಉದಾಹರಣೆಯೂ ಇದೆ.