28ರ ಸಂಜೆ 4 ಗಂಟೆಗೆ ರಥ ತಣ್ಣೀರುಹಳ್ಳ ಪ್ರವೇಶಿಸಲಿದ್ದು, 29ರಂದು ಉತ್ತರ ಬಡಾವಣೆ, ಸರಸ್ವತಿಪುರಂ,
ರಂಗೋಲಿಹಳ್ಳ, ಅಗ್ರಹಾರ ಬೀದಿಯಲ್ಲಿ ಸಂಚರಿಸಲಿದೆ. ಸಂಜೆ 6 ಗಂಟೆಗೆ ಸೀತಾರಾಮಂಜನೇಯ
ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ನಂತರ ಬೆಂಗಳೂರಿನ ವಿದ್ವಾನ್ ಬಿ.ಕೆ.
ಅನಂತರಾಮ್ ಮತ್ತು ತಂಡದಿಂದ ಕೊಳಲುವಾದನ ಕಾರ್ಯಕ್ರಮ ಇರಲಿದೆ. 30ರ ಬೆಳಿಗ್ಗೆಯಿಂದ ಸಂಜೆ
ವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ರಥ ಸಂಚಾರ ನಡೆಸಲಿದೆ. ಪುಣ್ಯ ಕಾರ್ಯದಲ್ಲಿ ನಗರದ ಎಲ್ಲರೂ
ಭಾಗವಹಿಸಬೇಕು ಎಂದು ಮನವಿ ಮಾಡಿದರು.