ನಗರದ ವಲ್ಲಭಾಯ್ ರಸ್ತೆಯ ಹೂವಿನ ವ್ಯಾಪಾರಿ ಭರತ್ (29) ಕೊಲೆಯಾದ ಯುವಕ. ಬೈಕ್ನಲ್ಲಿ ಬಿಡಿ ಹೂವುಗಳನ್ನು ಮಾರಾಟ ಮಾಡಲು ನಗರದ 80 ಅಡಿ ರಸ್ತೆಯ ರಾಜ್ಕುಮಾರ್ ನಗರದ ಬಳಿ ಹೋಗುತ್ತಿದ್ದ ವೇಳೆ ಎರಡು ಬೈಕಿನಲ್ಲಿ ಬಂದು ಅಡ್ಡಹಾಕಿದ ನಾಲ್ವರು ಮಚ್ಚಿನಿಂದ ಕೊಚ್ಚಿ ಹಾಕಿದ್ದಾರೆ. ಘಟನೆಯಲ್ಲಿ ಭರತ್ನ ತಲೆ ಎರಡು ಭಾಗವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.