ಪರಿಚಿತರಂತೆ ನಟಿಸಿ ಮನೆಯೊಳಗೆ ಪ್ರವೇಶಿಸಿರುವ ಕೊಲೆಗಾರರು, ತಲೆದಿಂಬಿನಿಂದ ಉಸಿರುಕಟ್ಟಿಸಿ ಇಬ್ಬರನ್ನು ಸಾಯಿಸಿದ್ದಾರೆ. ಉಮಾದೇವಿಯ ದೇಹ ಮಲಗುವ ಕೋಣೆಯಲ್ಲಿದ್ದರೆ, ಮುರಳೀಧರ್ ದೇಹ ಮತ್ತೊಂದು ಕೊಠಡಿಯಲ್ಲಿದೆ. ಮನೆಯಲ್ಲಿ ವಸ್ತುಗಳು ಮತ್ತು ಬಟ್ಟೆಬರೆ ಚೆಲ್ಲಾಪಿಲ್ಲಿಯಾಗಿವೆ. ಮನೆಯ ತುಂಬಾ ಖಾರದ ಪುಡಿ ಚೆಲ್ಲಾಡಿದ್ದಾರೆ. ಹಣಕ್ಕಾಗಿ ಬೀರುವನ್ನು ತಡಕಾಡಿದ್ದಾರೆ. ಮನೆಯಿಂದ ಹೊರ ಹೋಗುವಾಗ ದುಷ್ಕರ್ಮಿಗಳು ಮನೆಯ ಮುಂಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.