ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಾಧ್ಯಮಗಳಿಗೆ ರಾಜಕೀಯವಾಗಿ ಚರ್ಚೆ ಮಾಡಲು ಒಂದು ವಿಚಾರ ಬೇಕು. ಹಾಗಾಗಿ ಸಿ.ಎಂ ಬದಲಾಗುತ್ತಾರೆ ಎಂದು ಆರೋಗ್ಯಕರವಾಗಿ ಚರ್ಚೆ ನಡೆಯುತ್ತಿದೆ. ಮುಂದಿನ ಚುನಾವಣೆಯೂ ಅವರ ನೇತೃತ್ವದಲ್ಲಿಯೇ ನಡೆಯಲಿದೆ. ಚರ್ಚೆಯನ್ನು ಯಾರೋ ಹುಟ್ಟು ಹಾಕಿದ್ದಾರೆ. ಪಕ್ಷದ 120 ಕ್ಕೂ ಹೆಚ್ಚು ಶಾಸಕರು ಸರ್ಕಾರ ಸುಭದ್ರವಾಗಿ, ಅಭಿವೃದ್ಧಿ ಪರವಾಗಿ ನಡೆಯಬೇಕು ಎಂದು ಕಂಕಣಬದ್ಧರಾಗಿ ಸಿ.ಎಂ ಬೆಂಬಲಕ್ಕೆ ನಿಂತಿದ್ದಾರೆ’ ಎಂದು ತಿಳಿಸಿದರು.