ಸಂತೆಯಲ್ಲಿ ಮೂಲಸೌಕರ್ಯಗಳಿಲ್ಲ. ಸುಂಕ ವಸೂಲಿ ಮಾತ್ರ ಮಾಡುತ್ತಾರೆ. ಕೂರಲು ಪುರಸಭೆಯವರು ಮಣ್ಣು ಹಾಕಿ ಕಟ್ಟೆ ಮಾಡಿಕೊಟ್ಟಿದ್ದರು. ಆದರೆ ಅಕ್ಕಪಕ್ಕದ ಲೇಔಟ್ನವರು ಆ ಮಣ್ಣನ್ನೂ ತೆಗೆದುಕೊಂಡು ಹೋಗಿದ್ದಾರೆ.
ಶ್ರೀಧರ್ ನಿಂಬೆಹಣ್ಣು ವ್ಯಾಪಾರಿ
ರಸ್ತೆ ಪಕ್ಕದಲ್ಲಿ ನಡೆಯುತ್ತಿರುವ ವ್ಯಾಪರ ವಹಿವಾಟುಗಳನ್ನು ಸಂತೆ ಜಾಗದಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಗುಂಡಿ ಬಿದ್ದ ಜಾಗಗಳನ್ನು ಮಣ್ಣು ತುಂಬಿಸಲಾಗಿದೆ. ಸದ್ಯದಲ್ಲೇ ಕಟ್ಟೆ ಮೂಲಸೌಕರ್ಯ ಒದಗಿಸಲಾಗುವುದು
ಸುಜಯ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ
ಸಂತೆಗಾಗಿ ಪಟ್ಟಣಕ್ಕೆ ಹತ್ತಿರವಿರುವ ಜಾಗ ಗುರುತಿಸಿ ಕೊಡುವಂತೆ ಕಂದಾಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಂತೆಯನ್ನು ಸ್ಥಳಾಂತರ ಮಾಡಿ ಮುಜುರಾಯಿ ಜಾಗದಲ್ಲಿ ದೇಗುಲದ ಅಭಿವೃದ್ಧಿ ಮಾಡಲಾಗುವುದು.