ತಾಲ್ಲೂಕಿನ ಕಸಬಾ ಹೋಬಳಿಯ ತಟ್ಟೇಕೆರೆ ಗ್ರಾಮದ ವೆಂಕಟೇಶ್ ಅವರ ಪುತ್ರ ಟಿ.ವಿ.ಸತೀಶ್ ಅವರು ಶುಂಠಿ ಮಾರಿ ಬಂದಿದ್ದ ₹4.80 ಲಕ್ಷ ಹಣವನ್ನು ಹಾಸನದ ಆ್ಯಕ್ಸಿಸ್ ಬ್ಯಾಂಕಿಗೆ ಕಟ್ಟಲು ಹೊರಟ್ಟಿದ್ದರು. ದಾರಿ ಮಧ್ಯೆ ಪೆಟ್ರೋಲ್ ಹಾಕಿಸಲು ಬಂಕ್ಗೆ ಹೋಗಿದ್ದಾರೆ. ಆ ವೇಳೆ ಮೊಬೈಲ್ ಕರೆ ಬಂದ ಕಾರಣ ಕಾರಿನಿಂದ ಹೊರ ಬಂದು ಮಾತನಾಡಿ ಹೊರಡಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಬಂದ ಅಪರಿಚಿತ ವ್ಯಕ್ತಿ, ‘10 ರೂಪಾಯಿ ನೋಟುಗಳು ನಿಮ್ಮ ಜೇಬಿನಿಂದ ಬಿದ್ದಿವೆ ನೋಡಿ’ ಎಂದಿದ್ದಾನೆ. ಸತೀಶ್ ಕಾರಿನಿಂದ ಇಳಿದು ಬಿದ್ದಿದ್ದ ನೋಟುಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾರಿನ ಹಿಂಬದಿ ಸೀಟ್ನಲ್ಲಿದ್ದ ಹಣದ ಬ್ಯಾಗ್ಅನ್ನು ಕಳ್ಳರು ಕದ್ದಿದ್ದಾರೆ.