ಈ ಭಾಗದಲ್ಲಿ ಬೆಳೆದ ಟೊಮೆಟೊವನ್ನು ಮಂಗಳೂರು ಭಾಗದ ವ್ಯಾಪಾರಿಗಳು ಹೆಚ್ಚಾಗಿ ಖರೀದಿ ಮಾಡುತ್ತಿದ್ದರು. ಆದರೆ, ಚಾರ್ಮಾಡಿ ಘಾಟ್ ಬಂದಾಗಿರುವುದರಿಂದ ಆ ಭಾಗದ ವ್ಯಾಪಾರಿಗಳು ಇತ್ತ ಸುಳಿಯುತ್ತಿಲ್ಲ. ಹಳೇಬೀಡು, ಬೇಲೂರು, ಹಾಸನದ ಮಾರುಕಟ್ಟೆಗಳಲ್ಲಿ 15 ಕೆ.ಜಿ. ತೂಕದ ಬಾಕ್ಸ್ ಕೇವಲ ₹30ಕ್ಕೆ ಮಾರಾಟವಾಗುತ್ತಿದೆ. ರೈತರಿಗೆ ಸಾಗಣೆ ವೆಚ್ಚವೂ ಸಿಗುತ್ತಿಲ್ಲ ಎಂದು ರೈತ ಎಚ್.ಸಿ.ಚೇತನ್ ಅಳಲು ತೋಡಿಕೊಂಡರು.